ADVERTISEMENT

ಚಂಡೀಗಢ ಐಪಿಎಸ್‌ ಅಧಿಕಾರಿ ಆತ್ಮಹತ್ಯೆ: ಎಫ್‌ಐಆರ್‌ನಲ್ಲಿ ತಿದ್ದುಪಡಿ

ಪಿಟಿಐ
Published 12 ಅಕ್ಟೋಬರ್ 2025, 13:44 IST
Last Updated 12 ಅಕ್ಟೋಬರ್ 2025, 13:44 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಚಂಡೀಗಢ: ಐಪಿಎಸ್‌ ಅಧಿಕಾರಿ ವೈ. ಪೂರನ್‌ ಕುಮಾರ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಕೆಲವು ದುರ್ಬಲ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದು, ಇದಕ್ಕೆ ತಿದ್ದುಪಡಿ ಮಾಡಿ’ ಎಂಬ ಅಧಿಕಾರಿಯ ಪತ್ನಿಯ ಮನವಿಯನ್ನು ಒಪ್ಪಿ ಕಾಯ್ದೆಯ ಇತರ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ.

‘ಈ ಪ್ರಕರಣಕ್ಕೆ ಕಾಯ್ದೆಯ ಸೆಕ್ಷನ್‌ 3 (2) (ವಿ) ಸೂಕ್ತವಾಗಿದೆ. ಇದನ್ನೇ ಎಫ್‌ಐಆರ್‌ನಲ್ಲಿ ಸೇರಿಸಿ’ ಎಂದು ಹಿರಿಯ ಐಎಎಸ್‌ ಅಧಿಕಾರಿಯೂ ಆಗಿರುವ ಪೂರನ್ ಅವರ ಪತ್ನಿ ಅಮ್ನೀತ್‌ ಪಿ. ಕುಮಾರ್‌ ಅವರು ಪೊಲೀಸರಿಗೆ ಇತ್ತೀಚೆಗೆ ಮನವಿ ಮಾಡಿದ್ದರು.

ಆತ್ನಹತ್ಯೆ ಪ್ರಕರಣ ಸಂಬಂಧ ಹರಿಯಾಣ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು ಈ ಮಾಹಿತಿಯನ್ನು ದೃಢಪಡಿಸಿದೆ. ತಮ್ಮ ಈ ಬೇಡಿಕೆಯು ಪೂರ್ಣಗೊಳ್ಳುವರೆಗೂ ಪೂರನ್‌ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಗೆ ನೀಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟುಹಿಡಿದಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.