ADVERTISEMENT

ಚಾರ್‌ಧಾಮ್‌ ಯಾತ್ರೆ ಪುನರಾರಂಭ

ಪಿಟಿಐ
Published 25 ಮೇ 2022, 13:56 IST
Last Updated 25 ಮೇ 2022, 13:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡೆಹ್ರಾಡೂನ್‌: ಬುಧವಾರ ಬೆಳಿಗ್ಗೆ ಹವಾಮಾನ ಸಾಮಾನ್ಯ ಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಚಾರ್‌ಧಾಮ್‌ ಯಾತ್ರೆಯನ್ನು ಪುನರಾರಂಭಿಸಲಾಗಿದೆ.

ಭಾರಿ ಮಳೆ ಮತ್ತು ಹಿಮಪಾತದಿಂದ ಮಂಗಳವಾರ ಯಾತ್ರೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿ ಸೋನಪ್ರಯಾಗ್‌, ಗೌರಿಕುಂಡ್‌ ಮತ್ತು ಜಾಂಕಿಚಟ್ಟಿಯಲ್ಲಿ ಯಾತ್ರಿಕರಿಗೆ ತಂಗಲು ಸೂಚಿಸಲಾಗಿತ್ತು. ಹವಾಮಾನ ಸುಧಾರಿಸಿರುವ ಹಿನ್ನೆಲೆಯಲ್ಲಿ ಯಾತ್ರಿಕರು ದೇವಸ್ಥಾನಗಳಿಗೆ ತೆರಳಲು ಅವಕಾಶ ನೀಡಲಾಗಿದೆ ಎಂದು ಕೇದರನಾಥ – ಬದರಿನಾಥ ದೇವಸ್ಥಾನ ಮಂಡಳಿ ತಿಳಿಸಿದೆ.

ಹವಾಮಾನ ವೈಪರಿತ್ಯದಿಂದ ಸ್ಥಗಿತಗೊಳಿಸಲಾಗಿದ್ದ ಹೆಲಿಕಾಪ್ಟರ್‌ ಸಂಚಾರವನ್ನೂ ಆರಂಭಿಸಲಾಗಿದೆ.

ADVERTISEMENT

ಮೇ 3ರಿಂದ ಆರಂಭವಾದ ಚಾರ್‌ಧಾಮ್‌ ಯಾತ್ರೆಯ ಭಾಗವಾಗಿ ಬದರಿನಾಥ, ಕೇದರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ 9,69,610 ಭಕ್ತಾದಿಗಳು ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.