ADVERTISEMENT

ಇತಿಹಾಸ ನಿರ್ಮಿಸುವ ಅವಕಾಶ ಕೈಚೆಲ್ಲಿದ ಭೂಪೇಶ್‌ ಬಘೆಲ್‌

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2023, 15:02 IST
Last Updated 3 ಡಿಸೆಂಬರ್ 2023, 15:02 IST
<div class="paragraphs"><p>ಭೂಪೇಶ್‌ ಬಘೆಲ್‌</p></div>

ಭೂಪೇಶ್‌ ಬಘೆಲ್‌

   

ರಾಯಪುರ್: ಛತ್ತೀಸಗಢದಲ್ಲಿ ಇತಿಹಾಸ ನಿರ್ಮಿಸುವ ಅವಕಾಶವನ್ನು ಭೂಪೇಶ್‌ ಬಘೆಲ್‌ ಅವರು ಕೈಚೆಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ಅನ್ನು ಅವರು ಗೆಲುವಿನತ್ತ ಮುನ್ನಡೆಸಿದ್ದರೆ, ಸತತ ಮತ್ತೊಂದು ಅವಧಿಗೆ ಅಧಿಕಾರಕ್ಕೆ ಮರಳಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿರುತ್ತಿದ್ದರು.

ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಗಳು ಎಂದೇ ಬಿಂಬಿತರಾಗಿದ್ದ ಹಲವು ಪ್ರಮುಖ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ. ಟಿ.ಎಸ್‌. ಸಿಂಹದೇವ, ತಮ್ರಾಧ್ವಜ್‌ ಸಾಹು ಮತ್ತು ದೀಪಕ್‌ ಬಾಜಿ ಚುನಾವಣೆ ಸೋತಿದ್ದಾರೆ. ಪಕ್ಷದ ಹಿರಿಯ ನಾಯಕ ಚಂದ್ರನ್‌ದಾಸ್‌ ಮಹಾಂತ್‌ ಗೆಲುವು ಸಾಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.