ADVERTISEMENT

ಛತ್ತೀಸಗಡ: ನಕ್ಸಲರೊಂದಿಗೆ ಗುಂಡಿನ ಚಕಮಕಿ, ಯೋಧ ಹುತಾತ್ಮ

ಪಿಟಿಐ
Published 24 ಅಕ್ಟೋಬರ್ 2020, 10:36 IST
Last Updated 24 ಅಕ್ಟೋಬರ್ 2020, 10:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾರಾಯಣಪುರ: ಛತ್ತೀಸಗಡದ ನಾರಾಯಣಪುರದಲ್ಲಿ ಶನಿವಾರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ) ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿ, ಮತ್ತೊಬ್ಬ ಯೋಧ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಸಂತು ವಡ್ಡೆ ಹುತಾತ್ಮರಾದ ಯೋಧ. ಕಾನ್‌ಸ್ಟೆಬಲ್‌ ಬಜ್ಜು ರಾಮ್‌ ಕಚ್ಲಾಮ್‌ ಅವರಿಗೆ ಗಾಯಗಳಾಗಿವೆ.

ಓರ್ಛಾ ಪೊಲೀಸ್‌ ಠಾಣೆ ವ್ಯಾಪ್ತಿಯ ತಾಡೂರ್‌ ಗ್ರಾಮದಲ್ಲಿ ನಕ್ಸಲರ ವಿರುದ್ಧ ಡಿಆರ್‌ಜಿ ಕೈಗೊಂಡಿದ್ದ ಕಾರ್ಯಾಚರಣೆ ಮುಗಿಸಿ, ಮರಳುವ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್‌ ಗರ್ಗ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.