ADVERTISEMENT

ಮೂತ್ರ ವಿಸರ್ಜಿಸಿದ್ದ ಶಂಕರ್‌ ಮಿಶ್ರಾ ಮಾತು ಅವಹೇಳನಕಾರಿ: ಸಂತ್ರಸ್ತ ವೃದ್ಧೆ ಟೀಕೆ

ಪಿಟಿಐ
Published 14 ಜನವರಿ 2023, 13:40 IST
Last Updated 14 ಜನವರಿ 2023, 13:40 IST
ಶಂಕರ್‌ ಮಿಶ್ರಾ
ಶಂಕರ್‌ ಮಿಶ್ರಾ   

ನವದೆಹಲಿ (ಪಿಟಿಐ): ‘ಏರ್‌ ಇಂಡಿಯಾ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ನನ್ನ ಮೇಲೆ ಕುಡಿದ ಅಮಲಿನಲ್ಲಿ ಮೂತ್ರ ವಿಸರ್ಜಿಸಿದ್ದ ಆರೋಪಿ ಶಂಕರ್‌ ಮಿಶ್ರಾ ಈಗ ತಾನು ಮೂತ್ರ ವಿಸರ್ಜಿಸಿಯೇ ಇಲ್ಲ ಎಂದು ಹೇಳಿದ್ದಾರೆ. ಸ್ವತಃ ನಾನೇ ಮೂತ್ರ ಮಾಡಿಕೊಂಡಿರಬಹುದು ಎಂದೂ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರು ಆಡಿರುವ ಮಾತುಗಳು ಅವಹೇಳನಕಾರಿಯಾಗಿವೆ. ಜೊತೆಗೆ ಸತ್ಯಕ್ಕೆ ದೂರವಾಗಿವೆ’ ಎಂದು ಸಂತ್ರಸ್ತ ವೃದ್ಧೆ ಶನಿವಾರ ಕಿಡಿಕಾರಿದ್ದಾರೆ.

‘ನನ್ನ ಕಕ್ಷಿದಾರರ ವಿರುದ್ಧ ಶಂಕರ್‌ ಮಿಶ್ರಾ ಪರ ವಕೀಲರು ಮಾಡಿರುವ ಆರೋಪಗಳು ಸುಳ್ಳಿನಿಂದ ಕೂಡಿವೆ. ಅದೊಂದು ಕಟ್ಟು ಕಥೆ. ಜೊತೆಗೆ ಅವಹೇಳನಕಾರಿಯಾದುದು. ಆರೋಪಿತರ ಹೇಳಿಕೆಯು ಅವರು ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿರುವ ಅಂಶಗಳಿಗೆ ತದ್ವಿರುದ್ಧವಾಗಿದೆ’ ಎಂದು ಸಂತ್ರಸ್ತೆ ಪರ ವಕೀಲ ಅಂಕುರ್‌ ಮಹಿಂದ್ರೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಆರೋಪಿಯು ತನ್ನಿಂದಾಗಿರುವ ತಪ್ಪಿಗಾಗಿ ಪಶ್ಚಾತಾಪ ಪಡುವ ಬದಲು ದೂರುದಾರರಿಗೆ ಮತ್ತಷ್ಟು ಕಿರುಕುಳ ನೀಡುವ ಉದ್ದೇಶದಿಂದ ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ’ ಎಂದೂ ದೂರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.