ನವದೆಹಲಿ (ಪಿಟಿಐ): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಜನೆಗಳಿಗೆ ಮರು ನಾಮಕರಣ ಮಾಡುವುದು ಹಾಗೂ ಮರು ಚಾಲನೆ ನೀಡುವುದರಲ್ಲಿ ಪರಿಣತರು ಎಂದು ಕಾಂಗ್ರೆಸ್ ಮುಖಂಡ ಜೈರಾಂ ರಮೇಶ್ ಟೀಕಿಸಿದ್ದಾರೆ.
ಜನ್ಧನ್ ಯೋಜನೆ ಆರಂಭವಾಗಿ ಏಳು ವರ್ಷವಾದ ಹಿನ್ನೆಲೆಯಲ್ಲಿ ಈ ಮಾತು ಹೇಳಿರುವ ಅವರು, ಇದು ಯುಪಿಎ ಸರ್ಕಾರ ಆರಂಭಿಸಿದ್ದ ಉಳಿತಾಯ ಬ್ಯಾಂಕ್ ಠೇವಣಿ ಯೋಜನೆಯಾಗಿತ್ತು ಎಂದು ಹೇಳಿದರು.
‘ಜನ್ಧನ್ ಯೋಜನೆ ಕುರಿತು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ ಇದು ಯುಪಿಎ ಸರ್ಕಾರದ ಯೋಜನೆಯಾಗಿತ್ತು. ಮರುನಾಮಕರಣ, ಮರುಚಾಲನೆ ನೀಡುವುದರಲ್ಲಿ ಅವರು ಪರಿಣತರು’ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.