ADVERTISEMENT

ಸುದ್ದಿ ವಾಹಿನಿಯ ಚರ್ಚೆಯಲ್ಲಿ ಬಿಜೆಪಿ ನಾಯಕನ ಮೇಲೆ ನೀರು ಎರಚಿದ ಕಾಂಗ್ರೆಸ್ ನಾಯಕ!

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 14:28 IST
Last Updated 7 ಏಪ್ರಿಲ್ 2019, 14:28 IST
   

ನವದೆಹಲಿ: ಸುದ್ದಿವಾಹಿನಿಯೊಂದರಲ್ಲಿ ರಾಜಕೀಯ ವಿಷಯದಲ್ಲಿಚರ್ಚಾ ಕಾರ್ಯಕ್ರಮ ನಡೆಯುತ್ತಿದ್ದಾಗ ಸಿಟ್ಟುಗೊಂಡ ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ ಅವರುಬಿಜೆಪಿ ವಕ್ತಾರ ಕೆ.ಕೆ. ಶರ್ಮಾ ಅವರ ಮೇಲೆ ನೀರು ಎರಚಿದ್ದಾರೆ.

ಶನಿವಾರ ನ್ಯೂಸ್ 24 ಸುದ್ದಿವಾಹಿನಿಯಲ್ಲಿ ರಾಜಕೀಯ ಚರ್ಚೆ ನೇರ ಪ್ರಸಾರ ವೇಳೆ ಈ ಘಟನೆ ನಡೆದಿದೆ.

ಬಿಜೆಪಿ ವಕ್ತಾರ ಪದೇ ಪದೇ ದೇಶದ್ರೋಹಿ ಎಂದು ಕರೆದದ್ದಕ್ಕೆ ಸಿಟ್ಟುಗೊಂಡು ಕಾಂಗ್ರೆಸ್‍ನ ಶರ್ಮಾ, ಅಲ್ಲಿ ಮೇಜಿನ ಮೇಲಿಟ್ಟಿದ್ದ ಒಂದು ಲೋಟ ನೀರನ್ನು ಕೆ.ಕೆ ಶರ್ಮಾ ಮೇಲೆ ಎರಚಿದ್ದಾರೆ.

ADVERTISEMENT

ನೀರು ಎರಚಿದ್ದಕ್ಕಾಗಿ ಕ್ಷಮೆ ಕೇಳುವಂತೆ ಕೆ.ಕೆ. ಶರ್ಮಾಪಟ್ಟು ಹಿಡಿದರೆ, ತನ್ನನ್ನು ದೇಶದ್ರೋಹಿ ಎಂದಿದ್ದಕ್ಕೆ ಕ್ಷಮೆ ಕೇಳಿ ಎಂದು ಅಲೋಕ್ ಶರ್ಮಾ ಒತ್ತಾಯಿಸಿದ್ದಾರೆ.
ವಾಹಿನಿಯಲ್ಲಿ ಇಬ್ಬರು ನಾಯಕರು ಈ ರೀತಿ ಜಗಳವಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.