ADVERTISEMENT

ಮಕ್ಕಳ ಸಾವು ಪ್ರಕರಣ: ಸಿರಪ್‌ ಕಂಪನಿ ಮಾಲೀಕ ರಂಗನಾಥನ್‌ಗೆ ನ್ಯಾಯಾಂಗ ಬಂಧನ

ಪಿಟಿಐ
Published 20 ಅಕ್ಟೋಬರ್ 2025, 16:14 IST
Last Updated 20 ಅಕ್ಟೋಬರ್ 2025, 16:14 IST
   

ಛಿಂದ್ವಾಢ: ಮಧ್ಯಪ್ರದೇಶದಲ್ಲಿ 20ಕ್ಕೂ ಹೆಚ್ಚು ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಲಬೆರಕೆ ಕೆಮ್ಮು ಸಿರಪ್‌ ‘ಕೋಲ್ಡ್ರಿಫ್‌’ ತಯಾರಿಸಿದ ತಮಿಳುನಾಡು ಮೂಲದ ಸಂಸ್ಥೆಯ ಮಾಲೀಕ ಜಿ.ರಂಗನಾಥನ್‌ಗೆ ಸ್ಥಳೀಯ ನ್ಯಾಯಾಲಯವು ಸೋಮವಾರ ನ್ಯಾಯಾಂಗ ಬಂಧನ ವಿಧಿಸಿದೆ.

ಸ್ರೇಸನ್‌ ಫಾರ್ಮಾಸ್ಯುಟಿಕಲ್‌ನ ಮಾಲೀಕ ಡಾ. ಜಿ.ರಂಗನಾಥನ್‌ ಅವರನ್ನು ಬಂಧಿಸಿದ್ದ ವಿಶೇಷ ತನಿಖಾ ತಂಡವು (ಎಸ್‌ಐಟಿ) ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದಿತ್ತು.

ಪೊಲೀಸ್‌ ಕಸ್ಟಡಿಯ ಅವಧಿ ಮುಗಿದಿದ್ದರಿಂದ, ರಂಗನಾಥನ್ ಅವರನ್ನು ಪರಸಿಯಾ ಪಟ್ಟಣದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಗೌತಮ್ ಗುರ್ಜರ್‌ ಮುಂದೆ ಹಾಜರುಪಡಿಸಲಾಯಿತು ಎಂದು ಎಸ್‌ಐಟಿ ಮುಖ್ಯಸ್ಥ ಜಿತೇಂದ್ರ ಸಿಂಗ್ ಜಾಟ್ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.