ADVERTISEMENT

ಮಾ.25ರವರೆಗೆ ರಾಬರ್ಟ್‌ ವಾದ್ರಾ ನಿರಾಳ

ಪಿಟಿಐ
Published 19 ಮಾರ್ಚ್ 2019, 18:43 IST
Last Updated 19 ಮಾರ್ಚ್ 2019, 18:43 IST

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಬರ್ಟ್‌ ವಾದ್ರಾ ಅವರನ್ನು ಬಂಧಿಸದಂತೆ ನೀಡಿದ್ದ ಮಧ್ಯಂತರ ತಡೆಯನ್ನು ಮಾರ್ಚ್‌ 25ರವರೆಗೆ ದೆಹಲಿಯ ನ್ಯಾಯಾಲಯವು ವಿಸ್ತರಿಸಿದೆ.

ವಿಚಾರಣೆಗಾಗಿ ರಾಬರ್ಟ್ ವಾದ್ರಾ ಅವರನ್ನು ವಶಕ್ಕೆನೀಡುವಂತೆ ಜಾರಿ ನಿರ್ದೇಶನಾಲಯ ಕೇಳಿತ್ತು. ಆದರೆ,ಜಾರಿ ನಿರ್ದೇಶನಾಲಯಕ್ಕೆ ಹಾಜರಾಗಿ ತನಿಖೆಗೆ ಸಹಕಾರ ನೀಡುವಂತೆ ವಾದ್ರಾ ಅವರಿಗೆ ನ್ಯಾಯಾಲಯ ಸೂಚಿಸಿದೆ.

ವಿಶೇಷ ನ್ಯಾಯಧೀಶ ಅರವಿಂದ ಕುಮಾರ್‌ ಈ ತೀರ್ಪು ನೀಡಿದ್ದಾರೆ.

ADVERTISEMENT

ಲಂಡನ್‌ನಲ್ಲಿ 19 ಮಿಲಿಯನ್‌ ಪೌಂಡ್‌ (₹17.44 ಕೋಟಿ) ಮೊತ್ತದ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಪ್ರಕರಣದಲ್ಲಿ ವಾದ್ರಾ ಆರೋಪಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.