ADVERTISEMENT

ಗಂಗಾಜಲದಿಂದ ಅಂಬೇಡ್ಕರ್‌ ಪ್ರತಿಮೆ ಶುದ್ಧಿ

ಸಿಪಿಐ, ಆರ್‌ಜೆಡಿ ಕಾರ್ಯಕರ್ತರಿಂದ ಶುದ್ಧಿ

ಪಿಟಿಐ
Published 15 ಫೆಬ್ರುವರಿ 2020, 20:46 IST
Last Updated 15 ಫೆಬ್ರುವರಿ 2020, 20:46 IST

ಬೇಗುಸರಾಯ್‌ (ಬಿಹಾರ): ಅಂಬೇಡ್ಕರ್‌ ಪ್ರತಿಮೆಯನ್ನು ಕೇಂದ್ರ ಸಚಿವಗಿರಿರಾಜ್‌ ಸಿಂಗ್‌ ಅವರು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ, ಸಿಪಿಐ ಮತ್ತು ಆರ್‌ಜೆಡಿ ಕಾರ್ಯಕರ್ತರು ಪ್ರತಿಮೆಗೆ ಗಂಗಾಜಲ ಸಿಂಪಡಿಸಿ ಶುದ್ಧ ಮಾಡಿದ್ದಾರೆ.

ಶುಕ್ರವಾರ ಸಿಎಎ ಪರ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಮೊದಲು ಸಿಂಗ್‌ ಅವರು, ಜಿಲ್ಲೆಯ ಬಲಿಯಾ ಬ್ಲಾಕ್‌ನ ಉದ್ಯಾನದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದ್ದರು.ಇದನ್ನು ವಿರೋಧಿಸಿ,ಸ್ಥಳೀಯ ಸಿಪಿಐ ಮುಖಂಡ ಮತ್ತು ಆರ್‌ಜೆಡಿ ಕಾರ್ಯಕರ್ತರು, ‘ಜೈ ಭೀಮ್, ಫುಲೆ’ ಎಂದು ಘೋಷಣೆ ಕೂಗುತ್ತ ಪ್ರತಿಮೆಯನ್ನು ತೊಳೆದಿದ್ದಾರೆ.ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಡಲಾಗಿದೆ.

ಬಿಜೆಪಿಜಿಲ್ಲಾ ಘಟಕದ ಅಧ್ಯಕ್ಷ ರಾಜ್‌ ಕಿಶೋರ್‌ ಸಿಂಗ್‌, ‘ಅಂಬೇಡ್ಕರ್‌ ಸಮಾಜದ ಎಲ್ಲ ವರ್ಗಗಳಿಗೂ ಆದರ್ಶರಾಗಿದ್ದಾರೆ. ದೇಶ ಈ ವರ್ತನೆಯನ್ನು ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.