ನವದೆಹಲಿ: ‘ದೆಹಲಿ ಅಭಿವೃದ್ಧಿ ಪ್ರಾಧಿಕಾರವು (ಡಿಡಿಎ) ನೋಟಿಸ್ ನೀಡದೆಯೇ ಅತಿಕ್ರಮಣದಾರರನ್ನು ಮನೆಗಳಿಂದ ಹೊರಹಾಕುವಂತಿಲ್ಲ’ ಎಂದು ದೆಹಲಿ ಹೈಕೋರ್ಟ್ ಬುಧವಾರ ಹೇಳಿದೆ.
ಡಿಡಿಎ ಅಧಿಕಾರಿಗಳು ಶಾಕರ್ಪುರ ಪ್ರದೇಶದಲ್ಲಿನ ಹಲವು ಮನೆಗಳನ್ನು ನೆಲಸಮ ಮಾಡಿದ್ದರು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್, ‘ಡಿಡಿಎ ಅಧಿಕಾರಿಗಳು ಬುಲ್ಡೋಜರ್ಗಳನ್ನು ತೆಗೆದುಕೊಂಡು ಹೋಗಿ ಏಕಾಏಕಿ ಮನೆಗಳನ್ನು ಕೆಡವುವಂತಿಲ್ಲ. ಮನೆ ತೆರವುಗೊಳಿಸಲು ನಿವಾಸಿಗಳಿಗೆ ನಿರ್ದಿಷ್ಟ ಕಾಲಾವಕಾಶ ನೀಡಬೇಕು. ಒಂದೊಮ್ಮೆ ಕೆಡವಲೇ ಬೇಕಾದ ಪರಿಸ್ಥಿತಿ ಎದುರಾದರೆ ಜನರಿಗೆ ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.