ADVERTISEMENT

ರಾಜಸ್ಥಾನ | ರಾಜಕೀಯ ವಿಕೃತತೆಯ ಸೋಲು: ಶಿವಸೇನಾ

ಪಿಟಿಐ
Published 12 ಆಗಸ್ಟ್ 2020, 6:46 IST
Last Updated 12 ಆಗಸ್ಟ್ 2020, 6:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ‘ಆಪರೇಷನ್ ಕಮಲ’ಕ್ಕೆ ಸೋಲುಂಟಾಗಿದ್ದು, ಇದು ‘ರಾಜಕೀಯ ವಿಕೃತತೆ’ಯ ಸೋಲು ಎಂದು ಮಹಾರಾಷ್ಟ್ರದ ಶಿವಸೇನಾ ಪಕ್ಷ ಹೇಳಿದೆ.

ಪಕ್ಷದ ಮುಖವಾಣಿ ‘ಸಾಮ್ನಾ’ ಪತ್ರಿಕೆಯ ಸಂಪಾದಕೀಯದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಶಿವಸೇನಾ, ‘‘ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರು ‘ಆಪರೇಷನ್‌ ಕಮಲ’ ಮಾಡುವ ಬಿಜೆಪಿಯವರಿಗೆ ‘ಆಪರೇಷನ್‌’ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದಾರೆ’ ಎಂದು ಉಲ್ಲೇಖಿಸಿದೆ.

‘ಗೆಹ್ಲೋಟ್‌ ಮುಂದೆ ಸಚಿನ್ ಪೈಲಟ್‌ ದುರ್ಬಲ ಆಟಗಾರ’ ಎಂದು ಬಣ್ಣಿಸಿರುವ ಶಿವಸೇನಾ,‌‘ಈ ಎಲ್ಲ ಬೆಳವಣಿಗೆಗಳಿಂದ ಇನ್ನು ಮುಂದಾದರೂ ಬಿಜೆಪಿ ಪಾಠ ಕಲಿಯಬೇಕಿದೆ’ ಎಂದು ಅದು ಕಿವಿಮಾತು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.