ADVERTISEMENT

ಕಾಗದರಹಿತ ಕಲಾಪಗಳಿಗೆ ದೆಹಲಿ ವಿಧಾನಸಭೆ ಸಾಕ್ಷಿ; ಸಭಾಪತಿಯನ್ನು ಅಭಿನಂದಿಸಿದ AAP

ಪಿಟಿಐ
Published 4 ಆಗಸ್ಟ್ 2025, 16:24 IST
Last Updated 4 ಆಗಸ್ಟ್ 2025, 16:24 IST
<div class="paragraphs"><p>ದೆಹಲಿ ವಿಧಾನಸಭೆ</p></div>

ದೆಹಲಿ ವಿಧಾನಸಭೆ

   

ಪಿಟಿಐ

ನವದೆಹಲಿ: ಕಾಗದರಹಿತ ಸದನದ ಕಲಾಪಗಳಿಗೆ ದೆಹಲಿ ವಿಧಾನಸಭೆ ಸಾಕ್ಷಿಯಾಗಿದ್ದು, ಸ್ಪೀಕರ್ ವಿಜೇಂದರ್ ಗುಪ್ತಾ ಅವರನ್ನು ಬಿಜೆಪಿ ಮತ್ತು ಎಎಪಿ ಶಾಸಕರು ಅಭಿನಂದಿಸಿದ್ದಾರೆ.

ADVERTISEMENT

ದೆಹಲಿ ವಿಧಾನಸಭೆಯು ಡಿಜಿಟಲ್ ಆಡಳಿತದಲ್ಲಿ ಒಂದು ಮೈಲಿಗಲ್ಲನ್ನು ಸಾಧಿಸಿದೆ. ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಒಳಗೊಂಡಿದ್ದು, ಸೌರಶಕ್ತಿ ಆಧಾರದ ಮೇಲೆ ನಡೆಯುವ ದೇಶದ ಮೊದಲ ಶಾಸಕಾಂಗವಾಗಿದೆ.

ದೆಹಲಿ ವಿಧಾನಸಭೆಯು ಭಾರತದಾದ್ಯಂತ ಕಾಗದರಹಿತ ಶಾಸಕಾಂಗವನ್ನು ವಿನ್ಯಾಸಗೊಳಿಸಿಲು ಸಂಸದೀಯ ವ್ಯವಹಾರಗಳ ಸಚಿವಾಲಯ ಪರಿಚಯಿಸಿದ ಪ್ರಮುಖ ಯೋಜನೆಯಾದ ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್ ಅನ್ನು ಅಳವಡಿಸಿಕೊಂಡಿದೆ.

ಮಳೆಗಾಲದ ಅಧಿವೇಶನ ಆರಂಭವಾದ್ದರಿಂದ ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡದಿದ್ದಕ್ಕೆ ಎಎಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.

ಆತಿಥೇಯ ಇಂಗ್ಲೆಂಡ್‌ ವಿರುದ್ಧದ 'ಆ್ಯಂಡರ್ಸನ್‌–ತೆಂಡೂಲ್ಕರ್‌ ಟ್ರೋಫಿ' ಟೆಸ್ಟ್‌ ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಭಾರತ, ಕೈಜಾರಿದ್ದ ಗೆಲುವನ್ನು ಕೊನೇ ಕ್ಷಣದಲ್ಲಿ ಬಾಚಿಕೊಂಡಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 2–2 ಅಂತರದ ಸಮಬಲ ಸಾಧಿಸಿದ್ದಕ್ಕೆ ದೆಹಲಿ ವಿಧಾನಸಭೆ ಅಭಿನಂದನೆ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.