ADVERTISEMENT

ಆರೋಗ್ಯ ತುರ್ತು ಪರಿಸ್ಥಿತಿ: ಇಂದೋರ್‌ನಲ್ಲಿ ಇಳಿದ ದೆಹಲಿ–ಬೆಂಗಳೂರು ವಿಮಾನ

ಪಿಟಿಐ
Published 23 ನವೆಂಬರ್ 2021, 15:30 IST
Last Updated 23 ನವೆಂಬರ್ 2021, 15:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂದೋರ್‌:ದೆಹಲಿ–ಬೆಂಗಳೂರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ25 ವರ್ಷದ ಮಹಿಳೆಯೊಬ್ಬರಿಗೆಏಕಾಏಕಿ ಎದೆನೋವು ಕಾಣಿಸಿಕೊಂಡ ಕಾರಣ ವಿಮಾನವನ್ನು ತುರ್ತಾಗಿ ಇಲ್ಲಿನ ದೇವಿ ಅಹಿಲ್ಯಾಭಾಯಿ ಹೊಲ್ಕರ್‌ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

‘ಸೋಮವಾರ ರಾತ್ರಿ ವಿಸ್ತಾರ ಏರ್‌ಲೈನ್‌ನ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ ದೆಹಲಿ–ಬೆಂಗಳೂರು ಮಾರ್ಗದ ವಿಮಾನವನ್ನು ಇಂದೋರ್‌ನತ್ತ ತಿರುಗಿಸಲಾಯಿತು. ವಿಮಾನವು ರಾತ್ರಿ ಸುಮಾರು 10 ಗಂಟೆಗೆ ಇಂದೋರ್‌ಗೆ ಬಂದಿಳಿದಿದೆ. ಅವರನ್ನು ತಕ್ಷಣವೇ ಬಂತಿಯಾ ಆಸ್ಪತ್ರೆಗೆ ಕರೆದುಕೊಂಡಲಾಯಿತು. ಈ ಬಳಿಕ ವಿಮಾನವು, 11.07ಕ್ಕೆ ಬೆಂಗಳೂರಿನತ್ತ ತೆರಳಿತು’ ಎಂದು ಇಂದೋರ್‌ ವಿಮಾನ ನಿಲ್ದಾಣದಪ್ರಭಾರ ನಿರ್ದೇಶಕ ಪ್ರಬೋದ್‌ ಶರ್ಮಾ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT