ನವದೆಹಲಿ:ನಿರ್ಭಯಾ ಅತ್ಯಾಚಾರಿಗಳ ಮರಣದಂಡನೆಗೆ ದೆಹಲಿ ನ್ಯಾಯಾಲಯ ಶುಕ್ರವಾರ ತಡೆ ನೀಡಿದೆ.
ದೋಷಿಗಳಾದ ಪವನ್ ಗುಪ್ತಾ, ಮುಕೇಶ್ ಸಿಂಗ್ , ಅಕ್ಷಯ್ ಸಿಂಗ್ ಮತ್ತು ವಿನಯ್ ಶರ್ಮಾಗೆಕೋರ್ಟ್ ಮುಂದಿನ ನಿರ್ಧಾರ ಪ್ರಕಟಿಸುವವರೆಗೆ ಗಲ್ಲು ಶಿಕ್ಷೆ ವಿಧಿಸಲಾಗುವುದಿಲ್ಲ.
ಫೆ.1ರಂದು ಗಲ್ಲಿಗೇರಿಸುವ ವಾರೆಂಟ್ ರದ್ದು ಮಾಡಲಾಗಿದ್ದು, ಯಾವಾಗ ಮರಣದಂಡನೆ ಎಂಬುದರ ಬಗ್ಗೆ ನಿರ್ಧಾರವಾಗಿಲ್ಲ ಎಂದು ದೋಷಿಗಳ ಪರ ವಾದಿಸಿದ್ದ ವಕೀಲ ಎಪಿ ಸಿಂಗ್ಹೇಳಿದ್ದಾರೆ.
ದೋಷಿಗಳ ಪರ ವಾದಿಸಿದ್ದ ವಕೀಲರು ಕೋರ್ಟ್ನಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನನಗೆ ಹೇಳಿದ್ದಾರೆ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗುವುದಿಲ್ಲಎಂದು ಅವರು ಹೇಳುತ್ತಿರುವುದಾಗಿ ನಿರ್ಭಯಾಳ ಅಮ್ಮ ಮಾಧ್ಯಮದವರ ಮುಂದೆಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ:ನಿರ್ಭಯಾ ಅತ್ಯಾಚಾರಿಗಳಿಗೆ ಫೆ.1ರಂದು ಗಲ್ಲು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.