ADVERTISEMENT

ಕೋವಿಡ್‌ನಿಂದ ಕುಟುಂಬದ ಆದಾಯ ನಷ್ಟ: ದೆಹಲಿ ಸರ್ಕಾರದಿಂದ ನೆರವು

ಪಿಟಿಐ
Published 14 ಮೇ 2021, 8:45 IST
Last Updated 14 ಮೇ 2021, 8:45 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ಕೋವಿಡ್‌ನಿಂದ ಕುಟುಂಬವು ಆದಾಯ ಮೂಲವನ್ನೇ ಕಳೆದುಕೊಂಡರೆ, ಅಂತಹ ಕುಟುಂಬಗಳಿಗೆ ದೆಹಲಿ ಸರ್ಕಾರ ಹಣಕಾಸಿನ ನೆರವು ನೀಡಲಿದ್ದು, ಮಕ್ಕಳ ವಿದ್ಯಾಭ್ಯಾಸ ಮತ್ತು ಇತರ ವೆಚ್ಚಗಳನ್ನು ಭರಿಸಲು ಮುಂದಾಗಿದೆ.

ಶುಕ್ರವಾರ ಆನ್‌ಲೈನ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಕೋವಿಡ್‌ನಿಂದ ಹಲವಾರು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿರುವುದು ನನಗ ಗಮನಕ್ಕೆ ಬಂದಿದೆ. ನಾನು ಈಗಲೂ ಇಲ್ಲಿದ್ದೇನೆ, ಯಾರೂ ಅನಾಥರಲ್ಲ, ಅವರ ವಿದ್ಯಾಭ್ಯಾಸ ಮತ್ತು ಪ್ರೌಢ ಹಂತದವರೆಗೆ ಅವರಿಗೆ ಎಲ್ಲಾ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

ದೆಹಲಿಯಲ್ಲಿ ಹೊಸದಾಗಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯ ಹಾದಿಯಲ್ಲಿದ್ದು, ಕೋವಿಡ್‌ ವಿರುದ್ಧ ಹೋರಾಟ ಇನ್ನೂ ಮುಗಿದಿಲ್ಲ ಎಂದರು.‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.