ADVERTISEMENT

7 ಮಂದಿಯಲ್ಲಿ ಒಬ್ಬರಿಗೆ ಖಿನ್ನತೆ

ಐಸಿಎಂಆರ್– ಪಿಎಚ್‌ಎಫ್‌ಇ ಸಹಯೋಗದಲ್ಲಿ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 1:46 IST
Last Updated 24 ಡಿಸೆಂಬರ್ 2019, 1:46 IST
ಖಿನ್ನತೆ
ಖಿನ್ನತೆ   

ನವದೆಹಲಿ : 2017ರಲ್ಲಿ ದೇಶದ ಪ್ರತಿ7 ಮಂದಿಯಲ್ಲಿ ಒಬ್ಬರು ಮಾನಸಿಕ ರೋಗದಿಂದ ಬಳಲಿದ್ದು, ಇವರಲ್ಲಿ ಖಿನ್ನತೆ ಮತ್ತು ಭಾವೋದ್ರೇಕಕ್ಕೆ ಒಳಗಾದವರು ಹೆಚ್ಚು ಎಂದು ಅಧ್ಯಯನ ತಿಳಿಸಿದೆ.

ಮಾನಸಿಕ ಅಸ್ವಸ್ಥತೆಯ 10 ವಿಭಾಗಗಳಲ್ಲಿ ಕರ್ನಾಟಕವು 6ರಲ್ಲಿ ದೇಶದ ಸರಾಸರಿಗಿಂತ ಅಧಿಕ ರೋಗಿಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್), ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನ (ಪಿಎಚ್‌ಎಫ್‌ಇ) ಸಹಯೋಗದಲ್ಲಿ ‘ಇಂಡಿಯಾ ಸ್ಟೇಟ್‌ ಲೆವೆಲ್‌ ಡಿಸೀಸ್‌ ಬರ್ಡನ್‌ ಇನಿಷಿಯೇಟಿವ್’ ಈ ಅಧ್ಯಯನವನ್ನುಭಾರತದ ಎಲ್ಲ ರಾಜ್ಯಗಳಲ್ಲಿ ನಡೆಸಿದ್ದು, ವರದಿಯನ್ನು‘ಲ್ಯಾನ್ಸೆಟ್ ಸೈಕಿಯಾಟ್ರಿ’ ನಿಯತಕಾಲಿಕೆಯು ಪ್ರಕಟಿಸಿದೆ.

ADVERTISEMENT

ಅಧ್ಯಯನಕ್ಕೆ ಮೂರು ದಶಕಗಳಲ್ಲಿ ಸಂಗ್ರಹಿಸಲಾದ ವೈದ್ಯಕೀಯ ದತ್ತಾಂಶವನ್ನು ಬಳಸಿಕೊಳ್ಳಲಾಗಿದೆ.1990ರಲ್ಲಿ ಮೊದಲ ವರದಿಯನ್ನು‘ಲ್ಯಾನ್ಸೆಟ್ ಸೈಕಿಯಾಟ್ರಿ’ಯಲ್ಲಿಯೇ ಪ್ರಕಟಿಸಲಾಗಿತ್ತು.

ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರ ಸಂಖ್ಯೆಯು 1990–2017ರ ಅವಧಿಯಲ್ಲಿ ದ್ವಿಗುಣಗೊಂಡಿದೆ.ಸ್ಕಿಜೋಫ್ರೇನಿಯಾ, ಖಿನ್ನತೆ, ಭಾವೋದ್ರೇಕ,ಉನ್ಮಾದ ಖಿನ್ನತೆಯ ಕಾಯಿಲೆ (ಬೈಪೋಲಾರ್‌ ಡಿಸಾರ್ಡರ್), ನರರೋಗ ಸಮಸ್ಯೆ (ಆಟಿಸಂ) ಸೇರಿದಂತೆ ರೋಗಗಳು ಭಾರತದ ಕೋಟ್ಯಂತರ ಮಂದಿಯನ್ನು ಬಾಧಿಸುತ್ತಿದೆ. ಇದನ್ನು ನಿವಾರಿಸಲು ಯೋಜಿತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂಬ ಸಲಹೆಯನ್ನೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.