ADVERTISEMENT

ಕ್ಯಾನ್ಸರ್‌ನಿಂದ ನಾನು ಸಂಪೂರ್ಣ ಗುಣಮುಖ: ಇಸ್ರೊ ಅಧ್ಯಕ್ಷ

ಪಿಟಿಐ
Published 4 ಮಾರ್ಚ್ 2024, 19:54 IST
Last Updated 4 ಮಾರ್ಚ್ 2024, 19:54 IST
ಎಸ್‌.ಸೋಮನಾಥ್
ಎಸ್‌.ಸೋಮನಾಥ್   

ನವದೆಹಲಿ/ ತಿರುವನಂತಪುರ : ‘ಕ್ಯಾನ್ಸರ್‌ನಿಂದ ಬಳಲಿದ್ದ ನಾನು, ಇದೀಗ ಸಂಪೂರ್ಣ ಗುಣಮುಖನಾಗಿದ್ದೇನೆ’ ಎಂದು ಇಸ್ರೊ ಅಧ್ಯಕ್ಷ ಎಸ್‌.ಸೋಮನಾಥ್‌ ಹೇಳಿದ್ದಾರೆ.

‘ನನಗೆ ಕ್ಯಾನ್ಸರ್‌ ಇದೆ ಎಂಬುದು ದೇಶದ ಮೊದಲ ಸೌರ ಅಧ್ಯಯನ ಯೋಜನೆಯ ಉಪಗ್ರಹ ಆದಿತ್ಯ ಎಲ್‌1 ಉಡಾವಣೆಯ ದಿನದಂದೇ ಪತ್ತೆಯಾಗಿತ್ತು. ಹೊಟ್ಟೆಯಲ್ಲಿ ಬೆಳೆದಿದ್ದ ಕ್ಯಾನ್ಸರ್‌ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿದೆ. ಕಿಮೋಥೆರಪಿ ಚಿಕಿತ್ಸೆ ಬಳಿಕ ಕ್ಯಾನ್ಸರ್‌ನಿಂದ ಗುಣಮುಖನಾದೆ’ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

‘ಚಂದ್ರಯಾನ–3 ಯೋಜನೆ ಸಮಯದಲ್ಲೇ ನನ್ನ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಆದರೆ ಸಮಸ್ಯೆ ಏನೆಂಬುದು ಸ್ಪಷ್ಟವಾಗಿರಲಿಲ್ಲ. ಆದಿತ್ಯ ಎಲ್‌1 ಉಪಗ್ರಹ ಉಡಾವಣೆಯ ಬೆನ್ನಲ್ಲೇ ಚೆನ್ನೈನಲ್ಲಿ ಆರೋಗ್ಯ ಪರೀಕ್ಷೆಗೆ ಒಳಗಾದೆ. ದೊಡ್ಡ ಕರುಳಿನಲ್ಲಿ ಗೆಡ್ಡೆ ಇರುವುದು ಪತ್ತೆಯಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.