ADVERTISEMENT

‘ಜಮ್ಮು–ಕಾಶ್ಮೀರ ವಿಧಾನಸಭೆ ವಿಸರ್ಜಿಸಿ–ಚುನಾವಣೆ ನಡೆಸಿ’

ಪಿಟಿಐ
Published 29 ಜುಲೈ 2018, 17:04 IST
Last Updated 29 ಜುಲೈ 2018, 17:04 IST

ಶ್ರೀನಗರ:ಜಮ್ಮು–ಕಾಶ್ಮೀರ ವಿಧಾನಸಭೆಯನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಆಗ್ರಹಿಸಿದ್ದಾರೆ.

‘ವಿಧಾನಸಭೆ ವಿಸರ್ಜಿಸಿದರೆ ಕುದುರೆ ವ್ಯಾಪಾರಕ್ಕೆ ಕಡಿವಾಣ ಬೀಳುತ್ತದೆ.ಆಡಳಿತದಲ್ಲಿ ಸ್ಥಿರತೆಯೂ ಕಾಣಿಸಿಕೊಳ್ಳುತ್ತದೆ. ಅಲ್ಲದೆ, ಚುನಾವಣೆಗೆ ಸಿದ್ಧಗೊಳ್ಳಲು ಎಲ್ಲ ಪಕ್ಷಗಳಿಗೆ ಸಮಯ ಸಿಗುತ್ತದೆ ಎಂದು ನ್ಯಾಷನಲ್‌ ಕಾನ್ಫ್‌ರೆನ್ಸ್‌ ಮುಖ್ಯಸ್ಥರೂ ಆಗಿರುವ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಪಿಡಿಪಿ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿಯು ಕಳೆದ ಜೂನ್‌ 19ರಂದು ಹಿಂಪಡೆದಿದೆ. ಇದಾದ ಬಳಿಕ ಮೆಹಬೂಬಾ ಮುಫ್ತಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.