ADVERTISEMENT

ರಾಜಪಕ್ಸೆ ನೇಮಕಕ್ಕೆ ಡಿಎಂಕೆ ಅಸಮಾಧಾನ

ಪಿಟಿಐ
Published 27 ಅಕ್ಟೋಬರ್ 2018, 17:31 IST
Last Updated 27 ಅಕ್ಟೋಬರ್ 2018, 17:31 IST

ಚೆನ್ನೈ: ಶ್ರೀಲಂಕಾದಲ್ಲಾದ ಹಠಾತ್‌ ರಾಜಕೀಯ ಬೆಳವಣಿಗೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಡಿಎಂಕೆ, ಅಲ್ಲಿನತಮಿಳರು ಮತ್ತು ತಮಿಳು ಮೀನುಗಾರರ ಕುರಿತು ಕಳವಳ ವ್ಯಕ್ತಪಡಿಸಿದೆ.

ಮಹಿಂದಾ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಿಸಿರುವುದು ಪ್ರಪಂಚದಾದ್ಯಂತ ಇರುವ ತಮಿಳರಿಗೆ ಆಘಾತವಾಗಿದೆ ಎಂದು ಸ್ಟಾಲಿನ್‌ ತಿಳಿಸಿದ್ದಾರೆ. ರಾತ್ರೋರಾತ್ರಿ ಶ್ರೀಲಂಕಾದ ಸರ್ಕಾರದಲ್ಲಿ ನಡೆದ ಬದಲಾವಣೆಯು ಹಲವು ರಹಸ್ಯಗಳನ್ನು ಒಳಗೊಂಡಿದೆ. ತಮ್ಮ ಹಕ್ಕುಗಳನ್ನು ಕೇಳುತ್ತಿರುವ ತಮಿಳರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT