ADVERTISEMENT

ಹರ್ಯಾಣ: ದುಷ್ಕರ್ಮಿಗಳ ಗುಂಡೇಟಿಗೆ ವೈದ್ಯ ಬಲಿ 

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 10:47 IST
Last Updated 7 ಜುಲೈ 2019, 10:47 IST
   

ಕರ್ನಾಲ್:ಹರ್ಯಾಣದ ಕರ್ನಾಲ್‌ನಲ್ಲಿ ರಾಜೀವ್ ಗುಪ್ತ (56) ಎಂಬವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಸ್ವಂತ ಆಸ್ಪತ್ರೆ ಹೊಂದಿರುವ ವೈದ್ಯ ರಾಜೀವ್ ಗುಪ್ತಾ ಅವರು ಶನಿವಾರ ಕಾರಿನಲ್ಲಿ ಮಾರುಕಟ್ಟೆ ಕಡೆಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.ತೀವ್ರ ಗಾಯಗೊಂಡ ಗುಪ್ತಅವರು ಭಾನುವಾರ ಅಸು ನೀಗಿದ್ದಾರೆ ಎಂದಿದ್ದಾರೆ ಪೊಲೀಸರು,

ಬಿಜೆಪಿ ಸರ್ಕಾರ ಇಲ್ಲಿನ ನಾಗರಿಕರ ರಕ್ಷಣೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.

ADVERTISEMENT

ಎಸ್‌ಯುವಿ ಕಾರಿನಲ್ಲಿ ವೈದ್ಯರು ಸಂಚರಿಸುತ್ತಿದ್ದಾಗ ಮುಖಮುಚ್ಚಿ ಆಯುಧಧಾರಿಗಳಾಗಿ ಬಂದಿದ್ದ ಮೂವರು ದುಷ್ಕರ್ಮಿಗಳು ಕಾರು ನಿಲ್ಲಿಸಿ ಗುಂಡು ಹಾರಿಸಿದ್ದಾರೆ. ಅವರು ಹಾರಿಸಿದ ಮೂರು ಬುಲೆಟ್‌ಗಳಲ್ಲಿ ಎರಡು ಬುಲೆಟ್ ಗುಪ್ತ ಅವರ ದೇಹ ಹೊಕ್ಕಿದೆ.

ತಮ್ಮ ಚಾಲಕನೊಂದಿಗೆ ಚೌರಾ ಬಜಾರ್ ಹೋಗುತ್ತಿದ್ದಾಗ ರಾಜೀವ್ ಗುಪ್ತಾ ಅವರ ಮೇಲೆ ಈ ದಾಳಿ ನಡೆದಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.