ADVERTISEMENT

MUDA Case | ಸಿದ್ದರಾಮಯ್ಯ ಪರ ರಾಹುಲ್‌ ನಿಲ್ಲುವರೇ?: ಬಿಜೆಪಿ

ಪಿಟಿಐ
Published 28 ಸೆಪ್ಟೆಂಬರ್ 2024, 15:46 IST
Last Updated 28 ಸೆಪ್ಟೆಂಬರ್ 2024, 15:46 IST
ಸುಧಾಂಶು ತ್ರಿವೇದಿ
ಸುಧಾಂಶು ತ್ರಿವೇದಿ   

ನವದೆಹಲಿ: ‘ಮುಡಾ ಪ್ರಕರಣ ವಿಚಾರದಲ್ಲಿ, ಮೊದಲೇ ಆರೋಪಿಯಾಗಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಿಲ್ಲುವರೇ’ ಎಂದು ಬಿಜೆಪಿ ಶನಿವಾರ ಪ್ರಶ್ನಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ‘ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಮಾಡಿರುವ ಅಪರೂಪದ ಪ್ರಕರಣವಿದು. ಇದು ಕಾಂಗ್ರೆಸ್‌ನ ‘ಭ್ರಷ್ಟ ಮುಖವಾಡ’ವನ್ನು ಕಳಚಿದೆ’ ಎಂದರು.

‘ರಾಜಕೀಯ ಕಾರಣಗಳಿಗಾಗಿ ಬಿಜೆಪಿಯು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಆರೋಪ ಮಾಡುತ್ತಿದೆ’ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ತ್ರಿವೇದಿ, ‘ಸಿದ್ದರಾಮಯ್ಯ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ವಿಚಾರದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳ ಪಾತ್ರ ಇಲ್ಲ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.