ADVERTISEMENT

ತೆಲಂಗಾಣ: ಬಿಆರ್‌ಎಸ್‌ ಸಚಿವರ ಕಚೇರಿಗಳಲ್ಲಿ ಇ.ಡಿ.ಶೋಧ

ಪಿಟಿಐ
Published 9 ನವೆಂಬರ್ 2022, 13:56 IST
Last Updated 9 ನವೆಂಬರ್ 2022, 13:56 IST
.
.   

ನವದೆಹಲಿ/ಹೈದರಾಬಾದ್‌: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಿಆರ್‌ಎಸ್‌ ಮುಖಂಡ ಹಾಗೂ ತೆಲಂಗಾಣ ಸಚಿವ ಗಂಗೂಲ ಕಮಲಾಕರ್ ಅವರಿಗೆ ಸೇರಿದ ಕಚೇರಿಗಳಲ್ಲಿ ಬುಧವಾರ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಹೈದರಾಬಾದ್‌ ಮತ್ತು ಕರೀಂನಗರ ಜಿಲ್ಲೆಗಳ ವಿವಿಧೆಡೆ ಶೋಧ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾನೈಟ್‌ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಿಬಿಐ ಎಫ್‌ಐಆರ್‌ ದಾಖಲಿಸಿಕೊಂಡ ಬಳಿಕ ಇ.ಡಿ ಕೂಡ ಇದೇ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.