ADVERTISEMENT

ಮತ ಕಳವು | ‘ಸಾಕ್ಷ್ಯಗಳಿದ್ದರೆ ರಾಹುಲ್‌ ಕೋರ್ಟ್‌ಗೆ ಹೋಗಲಿ’: ಏಕನಾಥ ಶಿಂದೆ

ಪಿಟಿಐ
Published 10 ಆಗಸ್ಟ್ 2025, 13:54 IST
Last Updated 10 ಆಗಸ್ಟ್ 2025, 13:54 IST
ಏಕನಾಥ ಶಿಂಧೆ
ಏಕನಾಥ ಶಿಂಧೆ   

ಥಾಣೆ: ‘ರಾಹುಲ್‌ ಬಳಿ ಮತ ಕಳ್ಳತನದ ಸಾಕ್ಷ್ಯಗಳಿದ್ದರೆ ಕೋರ್ಟ್‌ಗೆ ಹೋಗಲಿ ಅಥವಾ ಚುನಾವಣಾ ಆಯೋಗವನ್ನು ಸಂಪರ್ಕಿಸಲಿ. ಆಧಾರ ರಹಿತ ಆರೋಪದ ಮೂಲಕ, ‘ಮಹಾಯುತಿ’ ಸರ್ಕಾರವನ್ನು ಆಯ್ಕೆ ಮಾಡಿರುವ ಮಹಾರಾಷ್ಟ್ರದ ಜನರನ್ನು ಅವಮಾನಿಸಬೇಡಿ’ ಎಂದು ಶಿವಸೇನಾ ಮುಖಂಡ ಏಕನಾಥ ಶಿಂದೆ ಹೇಳಿದ್ದಾರೆ. 

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮತ್ತು ಚುನಾವಣಾ ಆಯೋಗ ಸೇರಿಕೊಂಡು ಮತಕಳ್ಳತನ ನಡೆಸಿವೆ. ಮಹಾರಾಷ್ಟ್ರ ಸೇರಿ ಮೂರು ರಾಜ್ಯಗಳಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ರಾಹುಲ್‌ ಆರೋಪಿಸಿದ್ದಾರೆ. ಈ ರೀತಿ ಸಾರ್ವಜನಿಕವಾಗಿ ವಾಸ್ತವಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುವ ಬದಲು, ಅವರ ಬಳಿ ಸಾಕ್ಷ್ಯಗಳಿದ್ದರೆ ಕೋರ್ಟ್‌ಗೆ ಹೋಗಲಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT