ADVERTISEMENT

ಪಟ್ನಾ: ಚುನಾವಣಾ ಆಯೋಗದ ವಿರುದ್ಧ ತೇಜಸ್ವಿ ಯಾದವ್‌ ವಾಗ್ದಾಳಿ

ಪಿಟಿಐ
Published 13 ಆಗಸ್ಟ್ 2025, 14:25 IST
Last Updated 13 ಆಗಸ್ಟ್ 2025, 14:25 IST
   

ಪಟ್ನಾ: ‘ಸಿಬಿಐ ಇ.ಡಿ ಮತ್ತು ಆದಾಯ ತೆರಿಗೆ ಇಲಾಖೆಗಳು ಪರಿಣಾಮಕಾರಿ ಆಗದ ಕಾರಣ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯು ಬಿಹಾರದಲ್ಲಿ ಚುನಾವಣಾ ಆಯೋಗವನ್ನು ಬಳಸಿಕೊಳ್ಳುತ್ತಿದೆ. ಈ ಮೂಲಕ ಅದು ಬಿಹಾರದ ವಿಧಾನಸಭಾ ಚುನಾವಣೆಯನ್ನು ‘ಫಿಕ್ಸ್‌’ ಮಾಡಲು ಪ್ರಯತ್ನಿಸುತ್ತಿದೆ’ ಎಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ವಾಗ್ದಾಳಿ ನಡೆಸಿದರು.

ಬಿಜೆಪಿಯ ಅನೇಕ ಬೆಂಬಲಿಗರಿಗೆ ಚುನಾವಣಾ ಆಯೋಗವು ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಗಳನ್ನು ಒದಗಿಸುತ್ತಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಬಿಜೆಪಿ ನಾಯಕರೂ ಆದ ಮುಜಾಫರ್‌ಪುರದ ಮೇಯರ್‌ ನಿರ್ಮಲಾ ದೇವಿ ಅವರು ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ ಎಂದು ಅವರು ಇದೇ ವೇಳೆ ಆರೋಪಿಸಿದರು. 

ADVERTISEMENT

‘ಚುನಾವಣಾ ಆಯೋಗವು ವಿಶ್ವಾಸದ್ರೋಹ ಎಸಗುತ್ತಿದೆ’ ಎಂದು ಆರೋಪಿಸಿದ ಅವರು ‘ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ಆಯ್ಕೆ ಮುಕ್ತವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.