ADVERTISEMENT

Chhattisgarh Result: ಕಾಂಗ್ರೆಸ್‌ ಗೆಲುವಿಗೆ ಅದೃಷ್ಟದ ಮೀನು ತಂದ ಕಾರ್ಯಕರ್ತರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಡಿಸೆಂಬರ್ 2023, 6:33 IST
Last Updated 3 ಡಿಸೆಂಬರ್ 2023, 6:33 IST
<div class="paragraphs"><p>ಮೀನು</p></div>

ಮೀನು

   

ರಾಯ್‌ಪುರ: ಛತ್ತೀಸಘಡ ವಿಧಾನಸಭಾ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಮುಂದಿದೆ. ಆದರೂ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ ಎಂದು ಆರ್‌ಜೆಡಿ ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ಮತ ಎಣಿಕೆ ಕೇಂದ್ರದ ಬಳಿ ಜೀವಂತ ಮೀನು ಹಿಡಿದುಕೊಂಡು ಬಂದಿರುವ ಕಾರ್ಯಕರ್ತರು, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.

ADVERTISEMENT

ಮೀನು ನಮಗೆ ಶುಭ ಸಂಕೇತ. ರಾಜ್ಯದಲ್ಲಿ ಕಾಂಗ್ರೆಸ್ ಖಂಡಿತವಾಗಿಯೂ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ಕಾರ್ಯಕರ್ತರದ್ದು. ಬಕೆಟ್‌ನಲ್ಲಿ ನೀರು ತುಂಬಿ ಮೀನನ್ನು ಇಟ್ಟಿರುವ ಅವರು, ಇದು ಇದ್ದರೆ ಸಾಕು ನಮ್ಮ ಗೆಲುವು ಗ್ಯಾರಂಟಿ ಎಂದು ಅವರು ಘೋಷಣೆ ಕೂಗಿ ಸಂಭ್ರಮಿಸಿದರು.

ಮತ್ತೊಂದೆಡೆ ಮತ ಎಣಿಕೆ ಪ್ರಗತಿ ಸಾಧಿಸುತ್ತಿದ್ದಂತೆ ರಾಜ್ಯದಲ್ಲಿ ಬಿಜೆಪಿ ಮುನ್ನೆಡೆ ಕಾಯ್ದುಕೊಂಡಿದೆ. ಹೀಗಾಗಿ ಅದೃಷ್ಟ ಯಾರಿಗೆ ಒಲಿಯಲಿದೆ ಎಂಬುದು ಪೂರ್ಣ ಫಲಿತಾಂಶ ಪ್ರಕಟದ ನಂತರವೇ ತಿಳಿಯಲಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.