ತಿರುಪತಿಯ ತಿರುಮಲದಲ್ಲಿರುವ ವೆಂಕಟೇಶ್ವರ ದೇವಾಲಯ
ತಿರುಪತಿ: ಚೆನ್ನೈ ಮೂಲದ ಆಟೊಮೊಬೈಲ್ ಕಂಪನಿಯೊಂದು ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ₹1.3 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಅನ್ನು ಕೊಡುಗೆ ನೀಡಿದೆ.
ಆಟೊಮೊಬೈಲ್ ಕಂಪನಿಯ ಪ್ರತಿನಿಧಿಗಳು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಕೀಲಿಯನ್ನು ಹಸ್ತಾಂತರಿಸಿದರು.
ಚೆನ್ನೈ ಮೂಲದ ಆಟೊಮೊಬೈಲ್ ಕಂಪನಿಯ ಸಿಇಒ ಗಣೇಶ್ ಮಣಿ ಮತ್ತು ಮುಖ್ಯ ವಾಣಿಜ್ಯ ಅಧಿಕಾರಿ ವೆಂಕಟರಾಮನ್ ಅವರು ಇಂದು (ಬುಧವಾರ) ಟಿಟಿಡಿಗೆ ₹1.33 ಕೋಟಿ ಮೌಲ್ಯದ ಎಲೆಕ್ಟ್ರಿಕ್ ಬಸ್ ಅನ್ನು ದಾನ ಮಾಡಿದ್ದಾರೆ ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯ ಪ್ರತಿನಿಧಿಗಳು ಪುರೋಹಿತರ ಸಮ್ಮುಖದಲ್ಲಿ ಎಲೆಕ್ಟ್ರಿಕ್ ಬಸ್ ಅನ್ನು ಟಿಟಿಡಿಗೆ ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.