ADVERTISEMENT

ಆನೆಗಳನ್ನು ಸೆರೆಹಿಡಿಯಬಾರದು: ಮದ್ರಾಸ್‌ ಹೈಕೋರ್ಟ್‌

ಪಿಟಿಐ
Published 24 ಸೆಪ್ಟೆಂಬರ್ 2021, 22:54 IST
Last Updated 24 ಸೆಪ್ಟೆಂಬರ್ 2021, 22:54 IST

ಚೆನ್ನೈ: ಸರ್ಕಾರವಾಗಲೀ, ವ್ಯಕ್ತಿಗಳಾಗಲಿ ಇನ್ನು ಮುಂದೆ ಆನೆಗಳನ್ನು ಸೆರೆಹಿಡಿಯಬಾರದು ಹಾಗೂ ತಮ್ಮ ವಶದಲ್ಲಿ ಇಟ್ಟುಕೊಳ್ಳಬಾರದು ಎಂದು ಮದ್ರಾಸ್‌ ಹೈಕೋರ್ಟ್‌, ಶುಕ್ರವಾರ ಮಹತ್ವದ ಆದೇಶ ನೀಡಿದೆ.

ಚಿಕಿತ್ಸೆ ಕಾರಣವೊಂದನ್ನು ಬಿಟ್ಟರೆ, ಬೇರಾವುದೇ ಕಾರಣಕ್ಕೂ ಆನೆಗಳನ್ನು ಸೆರೆ ಹಿಡಿಯದಂತೆ ಸರ್ಕಾರ ನೋಡಿಕೊಳ್ಳಬೇಕು. ಯಾವುದೇ ವ್ಯಕ್ತಿಯು, ಈಗಾಗಲೇ ತನ್ನಲ್ಲಿರುವ ಆನೆ ಹೊರತುಪಡಿಸಿ ಮತ್ತೆ ಬೇರೆ ಆನೆಗಳನ್ನು ಹಿಡಿದು ಸಾಕುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್‌ ಬ್ಯಾನರ್ಜಿ, ಪಿ.ಡಿ. ಆದಿಕೇಶವುಲು ಅವರಿದ್ದ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT