ADVERTISEMENT

ಎಲ್ಗಾರ್‌ ಪ್ರಕರಣ: ದೆಹಲಿಗೆ ಸ್ಥಳಾಂತರಗೊಳ್ಳಲು ನವಲಖಾ ಅವರಿಗೆ ಕೋರ್ಟ್‌ ಅನುಮತಿ

ಪಿಟಿಐ
Published 17 ಡಿಸೆಂಬರ್ 2025, 13:42 IST
Last Updated 17 ಡಿಸೆಂಬರ್ 2025, 13:42 IST
ಬಾಂಬೆ ಹೈಕೋರ್ಟ್‌
ಬಾಂಬೆ ಹೈಕೋರ್ಟ್‌   

ಮುಂಬೈ: ಎಲ್ಗಾರ್‌ ಪರಿಷತ್‌–ನಕ್ಸಲ್‌ ಸಂಬಂಧದ ಪ್ರಕರಣದ ಆರೋಪಿಯಾಗಿರುವ ಮಾನವ ಹಕ್ಕುಗಳ ಹೋರಾಟಗಾರ ಗೌತಮ್‌ ನವಲಖಾ ಅವರು ದೆಹಲಿಗೆ ಸ್ಥಳಾಂತರಗೊಳ್ಳಲು ಬಾಂಬೆ ಹೈಕೋರ್ಟ್‌ ಬುಧವಾರ ಒಪ್ಪಿಗೆ ನೀಡಿದೆ.

‘ನವಲಖಾ ಅವರು ವಿಚಾರಣೆಗಾಗಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಕಾಲಕಾಲಕ್ಕೆ ಹಾಜರಾಗಬೇಕು. ಪ್ರತಿ ಶನಿವಾರ ದೆಹಲಿ ಪೊಲೀಸ್‌ ಠಾಣೆಗೆ ಹಾಜರಾಗಬೇಕು. ತಮ್ಮ ಪಾಸ್‌ಪೋರ್ಟ್‌ ಅನ್ನು ಒಪ್ಪಿಸಬೇಕು. ಜೊತೆಗೆ, ಕೋರ್ಟ್‌ ಅನುಮತಿ ಇಲ್ಲದೆ ದೆಹಲಿ ಬಿಟ್ಟು ತೆರಳುವಂತಿಲ್ಲ’ ಎಂದು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಶ್ಯಾಮ್‌ ಚಂದಕ್‌ ಅವರ ಪೀಠ ಷರತ್ತು ವಿಧಿಸಿದೆ.

ನವಲಖಾ ಅವರಿಗೆ 2023ರಲ್ಲಿ ಬಾಂಬೆ ಹೈಕೋರ್ಟ್‌ ಜಾಮೀನು ನೀಡಿದೆ. ಆದರೆ, ಮುಂಬೈ ಬಿಟ್ಟು ತೆರಳದಂತೆ ಷರತ್ತು ವಿಧಿಸಿತ್ತು. ತಮ್ಮ ಹುಟ್ಟೂರಾದ ದೆಹಲಿಗೆ ಸ್ಥಳಾಂತರಗೊಳ್ಳಲು ಅವಕಾಶ ನೀಡುವಂತೆ ನವಲಖಾ ಅವರು ಈ ವರ್ಷ ಅರ್ಜಿ ಸಲ್ಲಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.