ನವದೆಹಲಿ: ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ವಿ.ಕೆ. ಸೆಕ್ಸೇನಾ ಅವರು ನನ್ನೊಂದಿಗೆ ಸಿಟ್ಟು ಮಾಡಿಕೊಂಡಷ್ಟು, ನನ್ನ ಹೆಂಡತಿಯೂಸಿಟ್ಟು ಮಾಡಿಕೊಂಡಿಲ್ಲ ಎಂದುದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಕಿಚಾಯಿಸಿದ್ದಾರೆ.
ಸೆಕ್ಸೇನಾ ಅವರುಸಾಕಷ್ಟು ವಿಚಾರಗಳಲ್ಲಿ ದೆಹಲಿ ಸರ್ಕಾರದೊಂದಿಗೆಭಿನ್ನಾಭಿಪ್ರಾಯ ಹೊಂದಿದ್ದಾರೆ.ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್, ಸೆಕ್ಸೇನಾ ಕುರಿತಂತೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
'ಲೆಫ್ಟಿನೆಂಟ್ ಗವರ್ನರ್ ಸಾಹೇಬರು ಪ್ರತಿದಿನ ನನ್ನ ಮೇಲೆ ಸಿಟ್ಟು ಮಾಡಿಕೊಂಡಷ್ಟು, ನನ್ನ ಹೆಂಡತಿಯೂಸಿಟ್ಟು ಮಾಡಿಕೊಂಡಿಲ್ಲ. ಎಲ್ಜಿ ಅವರು ಕಳೆದ ಆರು ತಿಂಗಳಲ್ಲಿ ನನಗೆ ಬರೆದಷ್ಟು 'ಪ್ರೇಮ ಪತ್ರ'ಗಳನ್ನುನನ್ನ ಹೆಂಡತಿ ಬರೆದಿಲ್ಲ. ಎಲ್ಜಿ ಸಾಹೇಬರೇ ಚೂರು ಆರಾಮಾಗಿರಿ. ಚೂರು ಆರಾಮಾಗಿ ಇರುವಂತೆ ನಿಮ್ಮ ಸೂಪರ್ ಬಾಸ್ಗೂ ಹೇಳಿ' ಎಂದು ತಮಾಷೆಯಾಗಿಯೇ ತಿವಿದಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟದ ಸಚಿವರು ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ರಾಜ್ ಘಾಟ್ ಹಾಗೂ ವಿಜಯ ಘಾಟ್ನಲ್ಲಿ ನಡೆದ ಕಾರ್ಯಕ್ರಮಗಳಿಗೆ ಹಾಜರಾಗದೆ 'ಸಂಪೂರ್ಣ ಅಸಡ್ಡೆ' ತೋರಿದ್ದಾರೆ ಎಂದು ಆರೋಪಿಸಿ ಸಕ್ಸೇನಾ ಅವರು ಕೇಜ್ರಿವಾಲ್ಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ಕೇಜ್ರಿವಾಲ್ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
ಮೂಲಸೌಕರ್ಯ ಯೋಜನೆಗಳು ವಿಳಂಬವಾಗುತ್ತಿವೆ ಎಂದು ಉಲ್ಲೇಖಿಸಿ, ಮರಗಳನ್ನು ಕಡಿಯಲು ತ್ವರಿತವಾಗಿ ಅನುಮತಿ ನೀಡುವಂತೆ ಕಳೆದವಾರ ಸಕ್ಸೇನಾ ಅವರು ಕೇಜ್ರಿವಾಲ್ಗೆ ಪತ್ರ ಬರೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.