ತಿರುಪತಿ: ತನಗೆಕೊರೊನಾವೈರಸ್ ತಗುಲಿದೆ ಎಂದು ಭಾವಿಸಿಆತಂಕಗೊಂಡ 50 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಚಿತ್ತುರೂಜಿಲ್ಲೆಯಲ್ಲಿ ನಡೆದಿದೆ.
ಎರಡು ದಿನಗಳಿಂದಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದ ಬಾಲಕೃಷ್ಣ ಗುಣಮುಖರಾಗಿಮನೆಗೆ ಮರಳಿದ್ದರು. ತನಗೆಕೊರೊನಾವೈರಸ್ ತಗುಲಿದೆ ಎಂದು ಭಾವಿಸಿ ಕುಟುಂಬದವರಿಗೆ ಹರಡುವುದನ್ನು ತಪ್ಪಿಸಲು ಆತ್ಮಹತ್ಯೆಮಾಡಿಕೊಂಡಿದ್ದಾರೆ.
'ಒಬ್ಬಂಟಿಯಾಗಿದ್ದ ಅವರು ತನಗೆಕೊರೊನಾವೈರಸ್ಸೋಂಕು ತಗಲಿದೆ ತನ್ನಿಂದ ದೂರ ಹೋಗುವಂತೆ ಕುಟುಂಬದವರಲ್ಲಿ ಹೇಳುತ್ತಿದ್ದರು,ಕುಟುಂಬದವರುಸಂಪರ್ಕಿಸಲು ಯತ್ನಿಸಿದಾಗಕೋಪಗೊಳ್ಳುತ್ತಿದ್ದರು, ಕೈಗೆ ಸಿಕ್ಕಿದ ವಸ್ತುಗಳನ್ನು ಎಸೆಯುತ್ತಿದ್ದರು, ತನ್ನನ್ನು ತಾನೇ ಕೊಠಡಿಯಲ್ಲಿ ಕೂಡಿಹಾಕಿಕೊಂಡಿದ್ದರು’ಎಂದು ಜಿಲ್ಲಾ ಆರೋಗ್ಯಾಧಿಕಾರಿಡಾ.ಪೆಂಚಾಲಯ್ಯ ಹೇಳಿದ್ದಾರೆ
ಕೊರೊನಾವೈರಸ್ ಸೋಂಕಿನ ಸಂಬಂಧಿಸಿದ ನ್ಯೂಸ್ಗಳನ್ನು ನಿರಂತರವಾಗಿಓದುತ್ತಿದ್ದರು, ಮಾನಸಿಕವಾಗಿಕುಗ್ಗಿದ್ದರುಎಂದು ಅವರ ಮಕ್ಕಳು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.