ADVERTISEMENT

ಕೇರಳ: ತಿರುವನಂತಪುರದಲ್ಲಿ ತೇಲುವ ಸೇತುವೆ ಹಾನಿಗೀಡಾಗಿ 15 ಜನರಿಗೆ ಗಾಯ

ಏಜೆನ್ಸೀಸ್
Published 9 ಮಾರ್ಚ್ 2024, 15:57 IST
Last Updated 9 ಮಾರ್ಚ್ 2024, 15:57 IST
<div class="paragraphs"><p>ಕೇರಳದ ತಿರುವನಂತಪುರದ ಬಳಿಯ&nbsp;ವರ್ಕಳದಲ್ಲಿ ಹಾನಿಗೀಡಾದ ತೇಲುವ ಸೇತುವೆ</p></div>

ಕೇರಳದ ತಿರುವನಂತಪುರದ ಬಳಿಯ ವರ್ಕಳದಲ್ಲಿ ಹಾನಿಗೀಡಾದ ತೇಲುವ ಸೇತುವೆ

   

ತಿರುವನಂತಪುರ: ತೇಲುವ ಸೇತುವೆಯು ತೀವ್ರ ಗಾಳಿಯಿಂದ ಹಾನಿಗೀಡಾಗಿ 15ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಕೇರಳದ ತಿರುವನಂತಪುರದ ವರ್ಕಳದಲ್ಲಿ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಇದ್ದಾರೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಮುದ್ರಕ್ಕೆ ಅಳವಡಿಸಿದ್ದ ತೇಲುವ ಸೇತುವೆಯು ಅತಿಯಾದ ಗಾಳಿಯಿಂದಾಗಿ ಹೆಚ್ಚು ತೂಗಾಡುತ್ತಿತ್ತು. ಈ ಸಂದರ್ಭದಲ್ಲಿ ಸೇತುವೆಯ ಹಿಡಿ ತುಂಡಾಗಿದ್ದರಿಂದ, ಪಳಿಗಳ ಮೇಲೆ ನಡೆದು ಸಾಗುತ್ತಿದ್ದವರು ಸಮುದ್ರಕ್ಕೆ ಬಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಘಟನಾಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಸ್ಥಳೀಯರೊಂದಿಗೆ ಸೇರಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದರು. ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.