ADVERTISEMENT

ವಿದೇಶಗಳಿಂದ ಬರುವವರು ಆರ್‌ಟಿಪಿಸಿಆರ್‌ಗೆ ಮುಂಗಡ ಕಾಯ್ದಿರಿಸಬೇಕು: ಕೇಂದ್ರ

ಡೆಕ್ಕನ್ ಹೆರಾಲ್ಡ್
Published 14 ಡಿಸೆಂಬರ್ 2021, 14:43 IST
Last Updated 14 ಡಿಸೆಂಬರ್ 2021, 14:43 IST
ಸಾಂದರ್ಭಿಕ ಚಿತ್ರ – ಕೃಪೆ: ಡೆಕ್ಕನ್ ಹೆರಾಲ್ಡ್
ಸಾಂದರ್ಭಿಕ ಚಿತ್ರ – ಕೃಪೆ: ಡೆಕ್ಕನ್ ಹೆರಾಲ್ಡ್   

ನವದೆಹಲಿ: ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮೈಕ್ರಾನ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ನಿಯಮ ರೂಪಿಸಿದೆ.

ಇದರಂತೆ, ಓಮೈಕ್ರಾನ್ ಪತ್ತೆಯಾಗಿರುವ ದೇಶಗಳಿಂದ ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಿಗೆ ಬರುವವರು ಆರ್‌ಟಿ–ಪಿಸಿಆರ್ ಪರೀಕ್ಷೆಗಾಗಿ ಕಡ್ಡಾಯವಾಗಿ ಮುಂಗಡ ಕಾಯ್ದಿರಿಸಬೇಕಾಗಿದೆ. ಡಿ.20ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ತಿಳಿಸಿದೆ.

ಮುಂಗಡ ಕಾಯ್ದಿರಿಸುವಿಕೆಗಾಗಿ ‘ಏರ್ ಸುವಿಧಾ ಪೋರ್ಟಲ್‌’ನಲ್ಲಿ ಮಾರ್ಪಾಡು ಮಾಡಲಾಗುವುದು. ಓಮೈಕ್ರಾನ್ ಪತ್ತೆಯಾಗಿರುವ ದೇಶಗಳಲ್ಲಿ ಸಂಚರಿಸಿರುವವರು ಭಾರತಕ್ಕೆ ಬರುವ ಮುನ್ನ ಈ ಪೋರ್ಟಲ್ ಮೂಲಕ ಆರ್‌ಟಿ–ಪಿಸಿಆರ್‌ಗೆ ಮುಂಗಡ ಕಾಯ್ದಿರಿಸಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.