ADVERTISEMENT

‘ದಿನಮಲರ್‌’ ಪತ್ರಿಕೆಯ ಮಾಜಿ ಸಂಪಾದಕ ನಿಧನ

ಪಿಟಿಐ
Published 4 ಮಾರ್ಚ್ 2021, 15:52 IST
Last Updated 4 ಮಾರ್ಚ್ 2021, 15:52 IST

ಚೆನ್ನೈ: ‘ದಿನಮಲರ್‌’ ತಮಿಳು ದಿನಪತ್ರಿಕೆಯ ಮಾಜಿ ಸಂಪಾದಕ ಆರ್.ಕೃಷ್ಣಮೂರ್ತಿ (88) ಹೃದಯಾಘಾತದಿಂದ ಗುರುವಾರ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿಯರು ಇದ್ದಾರೆ. ತಮ್ಮ ತಂದೆ ಟಿ.ವಿ ರಾಮಸುಬ್ಬಿಯರ್ ಪ್ರಾರಂಭಿಸಿದ ಪತ್ರಿಕೆಗೆ 1956ರಲ್ಲಿ ಸೇರಿದ ಆರ್.ಕೃಷ್ಣಮೂರ್ತಿ ಅವರು 1977ರಲ್ಲಿ ಅದರ ಸಂಪಾದಕರಾಗಿದರು.

ಪತ್ರಿಕೆಯ ತಿರುಚಿರಾಪಳ್ಳಿ ಆವೃತ್ತಿಯಲ್ಲಿ ‘ಪೆರಿಯಾರ್’ ಲಿಪಿಯನ್ನು ಪರಿಚಯಿಸಿ, ರಾಜ್ಯದಲ್ಲಿ ಆ ಲಿಪಿಪ್ರಸಿದ್ಧಿಯಾಗುವಂತೆ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.