ADVERTISEMENT

ತೇಜಸ್‌ ವಿಮಾನದಿಂದ ಕಳಚಿ ಬಿದ್ದ ಇಂಧನ ಟ್ಯಾಂಕ್‌

ಪಿಟಿಐ
Published 2 ಜುಲೈ 2019, 12:23 IST
Last Updated 2 ಜುಲೈ 2019, 12:23 IST
ತೇಜಸ್‌ ವಿಮಾನ
ತೇಜಸ್‌ ವಿಮಾನ   

ಕೊಯಮತ್ತೂರು: ತೇಜಸ್‌ ಯುದ್ಧ ವಿಮಾನದ ಇಂಧನ ಟ್ಯಾಂಕ್‌ ನಗರದ ಹೊರವಲಯದ ಕೃಷಿ ಭೂಮಿಯಲ್ಲಿ ಮಂಗಳವಾರ ಕಳಚಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರಕ್ಷಣಾ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ಆಕಾಶದಿಂದ ಇದ್ದಕ್ಕಿದ್ದಂತೆ 1,200 ಲೀಟರ್‌ ಪೆಟ್ರೋಲ್‌ ಟ್ಯಾಂಕ್‌ ಬೀಳುತ್ತಿರುವುದನ್ನು ಕಂಡು ಇರುಗೂರು ಗ್ರಾಮದ ಕೃಷಿ ಕಾರ್ಮಿಕರು ಆತಂಕಗೊಂಡಿದ್ದರು. ಜಮೀನಿನಲ್ಲಿ ಮೂರು ಅಡಿ ಆಳದ ಕುಳಿ ಉಂಟಾಗಿದ್ದಲ್ಲದೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಮೀಪದ ಸೂಲೂರು ವಾಯುನೆಲೆಯಲ್ಲಿಯುದ್ಧ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ.

ವಾಯುಪಡೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಐಎಎಫ್‌ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.