ಬೆಗುಸರಾಯ್, ಬಿಹಾರ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಸಂಬಂಧ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸ್ಥಳೀಯ ಕೋರ್ಟ್ಗೆ ಮಂಗಳವಾರ ಶರಣಾಗಿದ್ದಾರೆ.
ಮುಖ್ಯ ನ್ಯಾಯಾಧೀಶ ಠಾಕೂರ್ ಅಮನ್ ಕುಮಾರ್ ಎದುರು ಗಿರಿರಾಜ್ ಸಿಂಗ್ ಶರಣಾಗಿದ್ದಾರೆ. ನ್ಯಾಯಾಧೀಶರು ಗಿರಿರಾಜ್ ಸಿಂಗ್ ಅವರಿಂದ ₹ 5,000 ಮೊತ್ತದ ಎರಡು ಪ್ರತ್ಯೇಕ ಬಾಂಡ್ಗಳನ್ನು ಪಡೆದು ಜಾಮೀನು ಮಂಜೂರು ಮಾಡಿದ್ದಾರೆ.
ಏಪ್ರಿಲ್ 24ರಂದು ಬೆಗುಸರಾಯ್ನಲ್ಲಿ ನಡೆದ ಚುನಾವಣಾ ರ್ಯಾಲಿ ವೇಳೆ ಮುಸ್ಲಿಂ ಸಮುದಾಯವನ್ನು ಕುರಿತುಗಿರಿರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.