ADVERTISEMENT

ಗೂಗಲ್ ಉಪಾಧ್ಯಕ್ಷ ತೋಟ ಚಂದ್ರಶೇಖರ್ ಟಿಟಿಡಿಗೆ ₹ 1 ಕೋಟಿ ದೇಣಿಗೆ

ಪಿಟಿಐ
Published 26 ಜೂನ್ 2025, 6:51 IST
Last Updated 26 ಜೂನ್ 2025, 6:51 IST
ಟಿಟಿಡಿ
ಟಿಟಿಡಿ   

ತಿರುಪತಿ (ಆಂಧ್ರಪ್ರದೇಶ): ಗೂಗಲ್ ಉಪಾಧ್ಯಕ್ಷ ತೋಟ ಚಂದ್ರಶೇಖರ್ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಪ್ರಾಣದಾನ ಟ್ರಸ್ಟ್‌ಗೆ ₹ 1 ಕೋಟಿ ದೇಣಿಗೆ ನೀಡಿದ್ದಾರೆ.

ಈ ಬಗ್ಗೆ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಖಚಿತಪಡಿಸಿದ್ದಾರೆ. ಚಂದ್ರಶೇಖರ್‌ ಅವರಿಂದ ಚೆಕ್‌ ಪಡೆದಿರುವುದಾಗಿ ಅವರು ಹೇಳಿದ್ದಾರೆ.

ಟಿಟಿಡಿಯ ಅಧಿಕಾರಿಗಳು ದಾನಿ ಚಂದ್ರಶೇಖರ್‌ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ADVERTISEMENT

ತಿರುಪತಿಯ ತಿಮ್ಮಪ್ಪ ದೇವಾಲಯ ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.