‘ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವು ನೀಡುವ ‘ಪರೋಪಕಾರಿ’ಗಳ ರಕ್ಷಣೆಗೆಂದು ಕಾನೂನು ರೂಪಿಸಿ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ ಎರಡು ವರ್ಷಗಳೇ ಕಳೆದಿವೆ. ಈ ಸಂಬಂಧ ರೂಪಿಸಲಾದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುತ್ತೋಲೆ ಹೊರಡಿಸಿದೆ.ಆದರೆ ದೇಶದ ಎಲ್ಲೆಡೆ ಸಾರ್ವಜನಿಕರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ. ಈ ಸಂಬಂಧ ಕಾನೂನನ್ನು ರೂಪಿಸಿದ್ದು ಕರ್ನಾಟಕ ಮಾತ್ರ’ ಎನ್ನುತ್ತದೆ ಸೇವ್ ಲೈಫ್ ಪ್ರತಿಷ್ಠಾನದ ಅಧ್ಯಯನ ವರದಿ
ಕಾನೂನಿನ ಬಗ್ಗೆ ಬೆಂಗಳೂರಿಗರಿಗೆ ಗೊತ್ತೇ ಇಲ್ಲ
ದೇಶದ ವಿವಿಧ ನಗರಗಳಲ್ಲಿ ಈ ಕಾನೂನು ಗೊತ್ತಿಲ್ಲ ಎಂದವರ ಪ್ರಮಾಣ
ಇಂದೋರ್ 71 %
ಜೈಪುರ 72 %
ಮುಂಬೈ 78 %
ದೆಹಲಿ 79 %
ಕೋಲ್ಕತ್ತ 83 %
ಲುಧಿಯಾನ 83 %
ಕಾನ್ಪುರ 83 %
ವಾರಾಣಸಿ 84 %
ಹೈದರಾಬಾದ್ 89 %
ಬೆಂಗಳೂರು 92 %
ಚೆನ್ನೈ 93 %
ಆಧಾರ: ಸೇವ್ ಲೈಫ್ ಪ್ರತಿಷ್ಠಾನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.