ADVERTISEMENT

ಕಾಂಗ್ರೆಸ್‌ಗೆ ವಿದಾಯ: ವಾರದಲ್ಲಿ ಹಾರ್ದಿಕ್‌ ಪಟೇಲ್‌ ನಿರ್ಧಾರ

ನರೇಶ್‌ ಪಟೇಲ್‌ ಸೇರಿ ಪ್ರಮುಖ ಪಾಟಿದಾರ್‌ ನಾಯಕರೊಂದಿಗಿನ ಸಭೆ ಬಳಿಕ ನಿರ್ಣಯ

​ಪ್ರಜಾವಾಣಿ ವಾರ್ತೆ
Published 15 ಮೇ 2022, 15:56 IST
Last Updated 15 ಮೇ 2022, 15:56 IST
ಹಾರ್ದಿಕ್‌ ಪಟೇಲ್‌ –ಪಿಟಿಐ
ಹಾರ್ದಿಕ್‌ ಪಟೇಲ್‌ –ಪಿಟಿಐ   

ಅಹಮದಾಬಾದ್‌: ಗುಜರಾತ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಹಾರ್ದಿಕ್‌ ಪಟೇಲ್‌ ಅವರು ಪಕ್ಷದಲ್ಲಿಯೇ ಮುಂದುವರಿಯಬೇಕೇ ಅಥವಾ ಪಕ್ಷ ತ್ಯಜಿಸಬೇಕೇ ಎಂಬುದರ ಬಗ್ಗೆ ಒಂದು ವಾರದಲ್ಲಿ ನಿರ್ಧರಿಸಲಿದ್ದಾರೆ.

ಹಾರ್ದಿಕ್‌ ಪಟೇಲ್‌ ಯಾವುದೇ ಸಮಯದಲ್ಲಿ ಕಾಂಗ್ರೆಸ್‌ ಪಕ್ಷ ತೊರೆಯಬಹುದು ಎಂಬ ವದಂತಿ ಬೆನ್ನಲ್ಲೇ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನರೇಶ್‌ ಪಟೇಲ್‌ ಸೇರಿದಂತೆ ಪ್ರಮುಖ ಪಾಟಿದಾರ್‌ ನಾಯಕರೊಂದಿಗೆ ಅವರು ಭಾನುವಾರ ಸಭೆ ನಡೆಸಿದರು. ಸಭೆಯಲ್ಲಿ ‘ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್‌ ಹೈಕಮಾಂಡ್‌ ಭೇಟಿಯಾಗಿ ಅನಂತರ ಒಂದು ವಾರದ ಒಳಗಾಗಿ ಅಂತಿಮ ನಿರ್ಧಾರ ಕೈಗೊಳ್ಳಬೇಕು’ ಎಂಬ ನಿರ್ಣಯಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನರೇಶ್‌ ಪಟೇಲ್‌, ‘ಇಲ್ಲಿಯವರೆಗೂ ಏನೂ ಬದಲಾಗಿಲ್ಲ. ಹಾರ್ದಿಕ್‌ ಕಾಂಗ್ರೆಸ್‌ ಪಕ್ಷದಲ್ಲೇ ಇದ್ದಾರೆ. ಕಾಂಗ್ರೆಸ್‌ ತ್ಯಜಿಸಬೇಕೇ ಅಥವಾ ಇನ್ನೊಂದು ಪಕ್ಷ ಸೇರ್ಪಡೆಯಾಗಬೇಕೇ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿಲ್ಲ. ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಮುಂದಿನ 5–7 ದಿನದಲ್ಲಿ ಮತ್ತೊಂದು ಮಹತ್ವದ ಸಭೆ ಕರೆಯಲು ನಿರ್ಣಯ ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.