ADVERTISEMENT

ಗುರುಗ್ರಾಮ ಗುಂಡಿನ ದಾಳಿ ಪ್ರಕರಣ: ನ್ಯಾಯಾಧೀಶರ ಮಗನ ಮೆದುಳು ನಿಷ್ಕ್ರಿಯ

ಪಿಟಿಐ
Published 15 ಅಕ್ಟೋಬರ್ 2018, 12:32 IST
Last Updated 15 ಅಕ್ಟೋಬರ್ 2018, 12:32 IST
   

ಗುರುಗ್ರಾಮ:ಇಲ್ಲಿನ ಸೆಕ್ಟರ್‌ 49ರ ಆರ್ಕೇಡಿಯಾ ಮಾರ್ಕೆಟ್‌ನ ಹೊರಭಾಗದಲ್ಲಿ ಶನಿವಾರ ಅಂಗರಕ್ಷಕನಿಂದಲೇ ಗುಂಡಿನ ದಾಳಿಗೆ ಒಳಗಾಗಿದ್ದ ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಧೀಶರ ಪುತ್ರ ಧ್ರುವ(18) ಮೆದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದಾಳಿಯಲ್ಲಿ ಗಾಯಗೊಂಡಿದ್ದ ನ್ಯಾಯಾಧೀಶ ಕೃಷ್ಣಕಾಂತ್ ಪತ್ನಿ ರಿತು ಗಾರ್ಗ್(45) ಭಾನುವಾರ ಬೆಳಿಗ್ಗೆ ಮೃತಪಟ್ಟಿದ್ದರು. ಗುಂಡೇಟು ತಲೆಗೆ ತಗುಲಿರುವ ಧ್ರುವ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾರೆ.

ADVERTISEMENT

ಆರೋಪಿ ಮಹಿಪಾಲ್‌ನನ್ನು ಪೊಲೀಸರು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡಲು ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡ ರಚಿಸಿದೆ.

‘ಮಹೀಪಾಲ್ ಆಗಾಗ್ಗೆ ತನ್ನ ಹೇಳಿಕೆ ಬದಲಿಸುತ್ತಿದ್ದಾನೆ. ಕುಟುಂಬದ ಸಮಸ್ಯೆಗಳಿಂದ ಆತ ಖಿನ್ನತೆಗೆ ಒಳಗಾಗಿದ್ದಾನೆ’ ಎಂದು ವಿಶೇಷ ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.