ADVERTISEMENT

ಹುರಿಯತ್‌ ಕಾನ್ಫರೆನ್ಸ್‌ ಅಧ್ಯಕ್ಷರಾಗಿ ಮಸರತ್‌ ಆಲಂ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 17:03 IST
Last Updated 7 ಸೆಪ್ಟೆಂಬರ್ 2021, 17:03 IST

ಶ್ರೀನಗರ (ಪಿಟಿಐ): ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್‌ ಅಲಿ ಶಾ ಗಿಲಾನಿ ಸಾವಿನ ನಂತರ ಹುರಿಯತ್‌ ಕಾನ್ಫರೆನ್ಸ್‌ ತನ್ನ ಅಧ್ಯಕ್ಷರನ್ನಾಗಿ ಸೆರೆಯಲ್ಲಿರುವ ಮುಖಂಡ ಮಸರತ್‌ ಆಲಂ ಅವರನ್ನು ಆಯ್ಕೆ ಮಾಡಿದೆ.

ಶಬೀರ್‌ ಅಹ್ಮದ್‌ ಶಾ ಮತ್ತು ಗುಲಾಂ ಅಹ್ಮದ್‌ ಗುಲ್ಜಾರ್‌ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹುರಿಯತ್‌ ಸಂವಿಧಾನದ ಪ್ರಕಾರ ಚುನಾವಣೆ ನಡೆಯುವವರೆಗೂ ಈ ನೇಮಕಾತಿಗಳು ತಾತ್ಕಾಲಿಕವಾಗಿರುತ್ತವೆ ಎಂದು ಅದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.