ADVERTISEMENT

ಗುಜರಾತ್ | ಭಾರಿ ಮಳೆ: 8 ಜನರ ಸಾವು

ಹಲವು ಜಲಾಶಯಗಳು ಭರ್ತಿ l ಹಲವು ಗ್ರಾಮಗಳಿಗೆ ಸಂಪರ್ಕ ಕಡಿತ

ಪಿಟಿಐ
Published 25 ಜುಲೈ 2024, 4:13 IST
Last Updated 25 ಜುಲೈ 2024, 4:13 IST
<div class="paragraphs"><p>ಗುಜರಾತ್‌ನ ಸೂರತ್‌ನಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು <br></p></div>

ಗುಜರಾತ್‌ನ ಸೂರತ್‌ನಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು

   

–ಪಿಟಿಐ ಚಿತ್ರ

ADVERTISEMENT

ಅಹಮದಾಬಾದ್‌: ಗುಜರಾತ್‌ನ ವಿವಿಧೆಡೆ ಬುಧವಾರ ಧಾರಾಕಾರ ಮಳೆಯಾಗಿದ್ದು, ದೇವಭೂಮಿ ದ್ವಾರಕಾ, ಬನಸ್ಕಾಂತ, ಕಚ್‌ ಮತ್ತು ರಾಜ್‌ಕೋಟ್‌ ಜಿಲ್ಲೆಗಳಲ್ಲಿ ಮಳೆಯಿಂದ ಸಂಭವಿಸಿದ ಅವಘಡಗಳಿಂದ ಎಂಟು ಜನ ಮೃತಪಟ್ಟಿದ್ದಾರೆ.

ರಾಜ್ಯದ ಹಲವು ನದಿಗಳ ಹರಿವು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿದೆ.
ಇದರಿಂದಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ನೂರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ.

ಗುಜರಾತ್‌ನ ಸೂರತ್, ಭರೂಚ್ ಮತ್ತು ಆನಂದ್ ಜಿಲ್ಲೆಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಭಾರಿ ಮಳೆಯಾಗಿದೆ. ಹೀಗಾಗಿ, ಕೆಲವೆಡೆ ಶಾಲಾ ಮತ್ತು ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿತ್ತು.

ಕೆಲವು ಕಡೆಗಳಲ್ಲಿ ರೈಲು ಸೇವೆಗಳಲ್ಲೂ ವ್ಯತ್ಯಯವಾಗಿದೆ. 

ಈ ಬಾರಿಯ ಮಳೆಗಾಲದಲ್ಲಿ ರಾಜ್ಯದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.  ಈ ಮುಂಗಾರು ಹಂಗಾಮಿನಲ್ಲಿ ಬುಧವಾರದ ವೇಳೆಗೆ ರಾಜ್ಯ ಶೇ 51ರಷ್ಟು ಮಳೆಯನ್ನು ಪಡೆದಿದೆ. ಕಚ್‌ ಜಿಲ್ಲೆ, ಸೌರಾಷ್ಟ್ರ ವಲಯದಲ್ಲಿ ಕ್ರಮವಾಗಿ ಶೇ 75 ಮತ್ತು ಶೇ 73ರಷ್ಟು ಮಳೆ ಸುರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆನಂದ್‌ ಜಿಲ್ಲೆಯ ಬೊರ್ಸಾದ್ ತಾಲ್ಲೂಕಿನಲ್ಲಿ ಬೆಳಿಗ್ಗೆ 8 ಗಂಟೆಯಿಂದ ನಾಲ್ಕು ಗಂಟೆಗಳಲ್ಲಿ 314 ಮಿಲಿ ಮೀಟರ್‌ನಷ್ಟು ಮಳೆ ದಾಖಲಾಗಿದೆ. 


ಕೊಲ್ಹಾಪುರದಲ್ಲಿ 81 ಬ್ಯಾರೇಜ್‌ಗಳು ಮುಳುಗಡೆ

ಕೊಲ್ಹಾಪುರದಲ್ಲಿ ಭಾರಿ ಮಳೆಯ ಕಾರಣ, ಪಂಚಗಂಗಾ ನದಿ ಅಪಾಯದ ಮಟ್ಟ ಮೀರಲು ಕೆಲವು ಇಂಚುಗಳು ಮಾತ್ರ ಬಾಕಿ ಇದೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವ ಕಾರಣ 81 ಬ್ಯಾರೇಜ್‌ಗಳು ಮುಳುಗಡೆಯಾಗಿವೆ. ಕೃಷ್ಣ ನದಿ ತೀರದ ಪ್ರದೇಶಗಳಲ್ಲಿ ಅಗತ್ಯವಿರುವಷ್ಟು ಮಳೆಯಾಗಿದ್ದು, ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ ನೀರಿನ ಹರಿಯುವಿಕೆ ಹೆಚ್ಚಳವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.