ADVERTISEMENT

ಶಿಮ್ಲಾ ಪ್ರವಾಹ: ಕೊಚ್ಚಿಹೋದ ಉಪಾಹಾರಗೃಹ

ಪಿಟಿಐ
Published 23 ಜುಲೈ 2023, 16:19 IST
Last Updated 23 ಜುಲೈ 2023, 16:19 IST
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹ    

ಶಿಮ್ಲಾ : ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾನುವಾರವೂ ಮಳೆ ಸುರಿದಿದ್ದರಿಂದ ಪಬ್ಬರ್ ನದಿಯಲ್ಲಿ ದಿಢೀರ್ ಪ್ರವಾಹ ಬಂದಿದ್ದು, ರಸ್ತೆ ಬದಿಯಲ್ಲಿದ್ದ ಉಪಾಹಾರಗೃಹ ಕೊಚ್ಚಿಕೊಂಡು ಹೋಗಿದೆ. ಇದರೊಳಗಿದ್ದ ಮೂವರ ಮೃತದೇಹ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಾಬ್‌ ರಾಜ್ಯ ಸಾರಿಗೆ ನಿಗಮದ ಬಸ್‌ವೊಂದು ಜುಲೈ 10ರಂದು ಮನಾಲಿಯ ಬಿಯಾಸ್‌ ನದಿಯಲ್ಲಿ ಮುಳುಗಿದ್ದು, ಶನಿವಾರ ಅವಶೇಷ ಪತ್ತೆಯಾಗಿದೆ. ಆದರೆ ಇದೂವರೆಗೂ ಅದರೊಳಗಿದ್ದ 11 ಪ್ರಯಾಣಿಕರ ಪತ್ತೆಯಾಗಿಲ್ಲ.

‘ನಾಪತ್ತೆಯಾದ ಪ್ರಯಾಣಿಕರು ಉತ್ತರಪ್ರದೇಶದಿಂದ ಬಂದವರು. ಬಸ್‌ ಮುಳುಗಿದಾಗ ಅದರೊಳಗಿದ್ದರು ಎಂಬುದು ಗೊತ್ತಾಗಿದೆ. ಶೋಧ ನಡೆದಿದೆ’ ಎಂದು ಕುಲ್ಲು ಪೊಲೀಸ್ ವರಿಷ್ಠಾಧಿಕಾರಿ ಸಾಕ್ಷಿ ವರ್ಮಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.