ಮುಂಬೈ: ಸ್ಟ್ಯಾನ್ ಸ್ವಾಮಿ ಅವರು ಮಧ್ಯಂತರ ಜಾಮೀನು ಕೋರಿ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಜಾಮೀನು ನೀಡಬಾರದು ಎಂದು ಎನ್ಐಎ ವಾದಿಸಿತ್ತು.
‘ಜೈಲಿನಲ್ಲಿ ವೈದ್ಯಕೀಯ ಸವಲತ್ತು ಇಲ್ಲ. ನಾನು ದಿನೇ ದಿನೇ ಸಾಯುತ್ತಿದ್ದೇನೆ. ಜಾಮೀನು ದೊರೆಯದಿದ್ದರೆ ನಾನು ಇಲ್ಲೇ ಸತ್ತು ಹೋಗುತ್ತೇನೆ’ ಎಂದುಹಿಂದಿನ ವಿಚಾರಣೆ ವೇಳೆ ಸ್ಟ್ಯಾನ್ ಸ್ವಾಮಿ ಹೇಳಿದ್ದರು.
‘ಯಾವುದೇ ಕಾರಣಕ್ಕೂ ಅವರಿಗೆ ಜಾಮೀನು ನೀಡಬಾರದು’ ಎಂದು ಎನ್ಐಎ ಪ್ರತಿಪಾದಿಸಿತ್ತು. ಹೀಗಾಗಿ ಹೈಕೋರ್ಟ್ ಅರ್ಜಿ ತಿರಸ್ಕರಿಸಿತ್ತು. ಸ್ಟ್ಯಾನ್ ಸ್ವಾಮಿ ಪರ ವಕೀಲ ಮಿಹಿರ್ ದೇಸಾಯಿ, ಅನಾರೋಗ್ಯದ ಕಾರಣ ಮುಂದಿಟ್ಟು ಮತ್ತೆ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು ಹೈಕೋರ್ಟ್ ಸೋಮವಾರವಷ್ಟೇ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
ಸ್ಟಾನ್ ಸ್ವಾಮಿ ಅವರ ಕಸ್ಟಡಿ ಸಾವನ್ನೂ ತನಿಖೆಗೆ ಒಳಪಡಿಸಲಾಗುತ್ತದೆ ಹೈಕೋರ್ಟ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.