ನವದೆಹಲಿ: ಬಿಜೆಪಿಯ ಮೈ ಭೀ ಚೌಕೀದಾರ್ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ನಿಮ್ಮ ಮಕ್ಕಳು ವಾಚ್ಮನ್ ಆಗಬೇಕೆಂದು ಬಯಸುವುದಾದರೆ ನರೇಂದ್ರ ಮೋದಿಗೆ ಮತ ನೀಡಿ. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಬೇಕು ಎಂದಾದರೆ ಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿ ಎಂದಿದ್ದಾರೆ.
ಮೋದಿ ಇಡೀ ದೇಶದ ಜನರನ್ನು ಚೌಕೀದಾರ್ ಮಾಡಿದ್ದಾರೆ. ನೀವು ನಿಮ್ಮ ಮಕ್ಕಳನ್ನು ಚೌಕೀದಾರ್ ಮಾಡಬೇಕು ಎಂದಾದರೆ ಮೋದಿಗೆ ಮತ ನೀಡಿ.ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಡಾಕ್ಟರ್, ಎಂಜಿನಿಯರ್, ವಕೀಲರನ್ನಾಗಿ ಮಾಡಬೇಕು ಎಂದಾದರೆ ಶಿಕ್ಷಣ ಹೊಂದಿರುವ ಜನಗಳ ಪಕ್ಷವಾದಆಮ್ ಆದ್ಮಿ ಪಕ್ಷಕ್ಕೆ ಮತ ನೀಡಿ ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.