ADVERTISEMENT

ಕದ್ದ ಉಪನಾಮ ತೆಗೆದು ಚುನಾವಣೆ ಗೆದ್ದು ತೋರಿಸಿ: ರಾಹುಲ್‌ಗೆ ಸಿ.ಟಿ ರವಿ ಸವಾಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 12:31 IST
Last Updated 22 ಏಪ್ರಿಲ್ 2022, 12:31 IST
ಸಿ.ಟಿ.ರವಿ ಮತ್ತು ರಾಹುಲ್ ಗಾಂಧಿ
ಸಿ.ಟಿ.ರವಿ ಮತ್ತು ರಾಹುಲ್ ಗಾಂಧಿ   

ಬೆಂಗಳೂರು: ‘ರಾಹುಲ್ ಗಾಂಧಿ ಅವರೇ, ನೀವು ಕ್ಷುಲ್ಲಕ ಕುಟುಂಬ ರಾಜಕಾರಣಿ. ದೇಶಕ್ಕೆ ನಿಮ್ಮ ಕೊಡುಗೆ ದೊಡ್ಡ ಝೀರೋ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಟ್ವೀಟ್‌ ಮಾಡಿರುವ ಸಿ.ಟಿ.ರವಿ, ‘ಆತ್ಮೀಯ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮಾತೆಯ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಸ್ವಯಂ ನಿರ್ಮಿತ ವ್ಯಕ್ತಿ. ಆದರೆ, ನೀವು ಕ್ಷುಲ್ಲಕ ಕುಟುಂಬ ರಾಜಕಾರಣಿ. ದೇಶಕ್ಕೆ ನಿಮ್ಮ ಕೊಡುಗೆ ದೊಡ್ಡ ಝೀರೋ’ ಎಂದು ಕಿಡಿಕಾರಿದ್ದಾರೆ.

ಮುಂದುವರಿದು ‘ನಿಮ್ಮ ‘ಕದ್ದ ಉಪನಾಮ’ ತೆಗೆದು ಭಾರತದಲ್ಲಿ ಯಾವುದೇ ಭಾಗದಲ್ಲಾದರೂ ಚುನಾವಣೆಯಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸುವಂತೆ ನಾನು ನಿಮಗೆ ಸವಾಲು ಹಾಕುತ್ತೇನೆ’ ಎಂದು ರಾಹುಲ್‌ ಗಾಂಧಿ ವಿರುದ್ಧ ಸಿ.ಟಿ.ರವಿ ಗುಡುಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.