ನವದೆಹಲಿ: ದೇಶದಾದ್ಯಂತ 450 'ಶ್ರಮಿಕ್ ವಿಶೇಷ ರೈಲು'ಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ಕರೆತರಲಾಗಿದೆ ಎಂದು ರೈಲ್ವೆ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಡಿ.ಬಾಜಪೇಯಿ ತಿಳಿಸಿದ್ದಾರೆ.
ಕೆಲಸಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದ ಕಾರ್ಮಿಕರು ಲಾಕ್ಡೌನ್ ಹಿನ್ನೆಲೆಯಲ್ಲಿ ತಮ್ಮ ತವರಿಗೆ ಮರಳಲು ಸಾಧ್ಯವಾಗದೇ ಪರದಾಡುವಂತಾಗಿತ್ತು. ಆ ಕಾರಣ, ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರನ್ನು ಆಯಾ ರಾಜ್ಯಗಳಿಗೆ ತಲುಪಿಸಲು 'ಶ್ರಮಿಕ್ ವಿಶೇಷ ರೈಲು'ಗಳನ್ನು ನಿಯೋಜಿಸಿತ್ತು.
ಇದನ್ನೂ ಓದಿ:ರೈಲು ಸಂಚಾರ ಇಂದಿನಿಂದ ಆರಂಭ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.