ADVERTISEMENT

ನಾವಿಕನ ದೇಹ ಪತ್ತೆ

ಐಎನ್‌ಎಸ್‌ ಬ್ರಹ್ಮಪುತ್ರದಲ್ಲಿ ಬೆಂಕಿ ಅವಘಢ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 17:24 IST
Last Updated 24 ಜುಲೈ 2024, 17:24 IST
ಐಎನ್‌ಎಸ್‌ ಬ್ರಹ್ಮಪುತ್ರ 
ಐಎನ್‌ಎಸ್‌ ಬ್ರಹ್ಮಪುತ್ರ    

ನವದೆಹಲಿ(ಪಿಟಿಐ): ನೌಕಾಪಡೆಯ ಐಎನ್‌ಎಸ್‌ ಬ್ರಹ್ಮಪುತ್ರ ಯುದ್ಧನೌಕೆಯಲ್ಲಿ ಸಂಭವಿಸಿದ್ದ ಅಗ್ನಿ ಅವಘಡದ ವೇಳೆ ನಾಪತ್ತೆಯಾಗಿದ್ದ ನಾವಿಕ ಸೀತೇಂದ್ರ ಸಿಂಗ್‌ ಅವರ ಮೃತದೇಹ ಬುಧವಾರ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನಲ್ಲಿರುವ ನೌಕಾಪಡೆಯ ಡಾಕ್‌ಯಾರ್ಡ್‌ನಲ್ಲಿ ದುರಸ್ತಿಗಾಗಿ ಮಂಗಳವಾರ ನಿಲ್ಲಿಸಿದ್ದ ವೇಳೆ, ಯುದ್ಧನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಸೂಚನೆ: ಐಎನ್‌ಎಸ್‌ ಬ್ರಹ್ಮಪುತ್ರ ಯುದ್ಧನೌಕೆಯನ್ನು ಶೀಘ್ರವೇ ದುರಸ್ತಿಗೊಳಿಸಿ, ಕದನಕ್ಕೆ ಸನ್ನದ್ಧಗೊಳಿಸುವಂತೆ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್‌ ಕೆ.ತ್ರಿಪಾಠಿ ಅವರು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.