ADVERTISEMENT

ಜೂನ್‌ನಲ್ಲಿ PSLV ಉಡಾವಣೆಗೆ ಮತ್ತೆ ಪ್ರಯತ್ನ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

ಪಿಟಿಐ
Published 2 ಫೆಬ್ರುವರಿ 2026, 21:20 IST
Last Updated 2 ಫೆಬ್ರುವರಿ 2026, 21:20 IST
ಜಿತೇಂದ್ರ ಸಿಂಗ್‌
ಜಿತೇಂದ್ರ ಸಿಂಗ್‌   

ನವದೆಹಲಿ: ‘ಸತತ ಎರಡು ವೈಫಲ್ಯಗಳ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಪಿಎಸ್‌ಎಲ್‌ವಿ ರಾಕೆಟ್‌ ಉಡಾವಣೆಯನ್ನು ಜೂನ್‌ನಲ್ಲಿ ಮತ್ತೊಮ್ಮೆ ನಡೆಸಲು ಪ್ರಯತ್ನಿಸಲಿದೆ’ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ತಿಳಿಸಿದ್ದಾರೆ.

ಇದೇ ವೇಳೆ, ಈ ವೈಫಲ್ಯಗಳ ಹಿಂದೆ ವಿಧ್ವಂಸಕ ಕೃತ್ಯ ನಡೆದಿದೆ ಎಂಬ ಶಂಕೆಯನ್ನು ಅವರು ತಳ್ಳಿಹಾಕಿದ್ದಾರೆ.

‘ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಪಿಎಸ್‌ಎಲ್‌ವಿ– ಸಿ61 ಮತ್ತು ಈ ವರ್ಷ ಜನವರಿಯಲ್ಲಿ ನಡೆದ ಪಿಎಸ್‌ಎಲ್‌ವಿ– ಸಿ62 ಉಡಾವಣೆಯು ವಿಫಲಗೊಳ್ಳಲು ಒಂದೇ ರೀತಿಯ ಕಾರಣಗಳು ಇರಲಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.