ADVERTISEMENT

ಜಮ್ಮು–ಕಾಶ್ಮೀರ | ಭಯೋತ್ಪಾದಕ ಜಾಲಕ್ಕೆ ಬೆಂಬಲ: ಐವರು ಸರ್ಕಾರಿ ಉದ್ಯೋಗಿಗಳ ವಜಾ

ಭಯೋತ್ಪಾದಕ ಜಾಲಕ್ಕೆ ಬೆಂಬಲ ನೀಡುವವರ ವಿರುದ್ಧದ ಅಭಿಯಾನ ಚುರುಕು

ಪಿಟಿಐ
Published 13 ಜನವರಿ 2026, 14:31 IST
Last Updated 13 ಜನವರಿ 2026, 14:31 IST
ಮನೋಜ್ ಸಿನ್ಹಾ
ಮನೋಜ್ ಸಿನ್ಹಾ   

ಶ್ರೀನಗರ: ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಐವರು ಸರ್ಕಾರಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಆದೇಶಿಸಿದ್ದಾರೆ.

ಈ ಮೂಲಕ, ಸರ್ಕಾರಿ ವ್ಯವಸ್ಥೆಯ ಒಳಗಿದ್ದುಕೊಂಡು ಭಯೋತ್ಪಾದಕ ಜಾಲಕ್ಕೆ ಬೆಂಬಲ ನೀಡುವವರ ವಿರುದ್ಧದ ಅಭಿಯಾನವನ್ನು ಚುರುಕುಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂವಿಧಾನದ 311(2)(ಸಿ) ಪರಿಚ್ಛೇದದ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಪರಿಚ್ಛೇದವು ಇಲಾಖಾ ತನಿಖೆ ಇಲ್ಲದೇ ಸರ್ಕಾರಿ ಉದ್ಯೋಗಿಗಳ ವಜಾಕ್ಕೆ ಅವಕಾಶ ನೀಡುತ್ತದೆ.

ADVERTISEMENT

‘ಕೆಲವು ಸರ್ಕಾರಿ ಉದ್ಯೋಗಿಗಳು ನಿಷೇಧಿತ ಲಷ್ಕರ್‌–ಎ–ತೊಯಬಾ ಮತ್ತು ಹಿಜ್ಬುಲ್‌ ಮುಜಾಹಿದೀನ್‌ ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಗುಪ್ತಚರ ಮತ್ತು ತನಿಖಾ ಸಂಸ್ಥೆಗಳು ಮಾಹಿತಿ ನೀಡಿದ್ದವು’ ಎಂದು ಅವರು ತಿಳಿಸಿದರು.

ಲೆಫ್ಟಿನೆಂಟ್ ಗವರ್ನರ್‌ ಕಚೇರಿಯು 2021ರಿಂದ ಭಯೋತ್ಪಾದನೆ ಜಾಲಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಉಗ್ರ ಜಾಲದೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಪ್ರಮುಖ ಸರ್ಕಾರಿ ಉದ್ಯೋಗಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.